News Karnataka Kannada
Monday, April 29 2024
ಕಾಸರಗೋಡು

‘ನಿಷೇಧ ಹೇರಿದ ಕೀಟನಾಶಕವನ್ನು ತಜ್ಞರ ಸಲಹೆಯಂತೆ  ನಿಷ್ಕ್ರೀಯಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು’

New Project 2021 10 21t073351.620
Photo Credit :

ಕಾಸರಗೋಡು : ಜಿಲ್ಲೆಯ  ತೋಟಗಾರಿಕಾ ನಿಗಮದ ಗೋದಾಮುಗಳಲ್ಲಿ ದಾಸ್ತಾನಿರುವ ಎಂಡೋ ಸಲ್ಫಾನ್  ನಿಷ್ಕ್ರೀಯ ಗೊಳಿಸುವ ಕುರಿತು ತಜ್ಞರ ಸಮಿತಿಯಿಂದ ವರದಿ ಪಡೆಯಲು ಜಿಲ್ಲಾಧಿಕಾರಿ  ಭಂಡಾರಿ ಸ್ವಾಗತ್ ರವರ ಅಧ್ಯಕ್ಷತೆಯಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.ಈ ಕುರಿತು ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ.
ನಿಷೇಧ ಹೇರಿದ ಕೀಟನಾಶಕವನ್ನು ತಜ್ಞರ ಸಲಹೆಯಂತೆ  ನಿಷ್ಕ್ರೀಯಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು . ಜನರ  ಆತಂಕವನ್ನು  ಪರಿಹರಿಸಿ  ತಜ್ಞರ ವರದಿಯಾದರದಲ್ಲಿ ಮುಂದಿನ ಕ್ರಮತೆಗೆದುಕೊಳ್ಳಲಾಗುವುದು . ಎಂಡೋಸಲ್ಫಾನ್ ಕೀಟನಾಶಕ  ನಿಷ್ಕ್ರೀಯ ಕುರಿತು  ಈಗ ಇರುವ ಪ್ರಕ್ರಿಯೆ ಗಳ ಬಗ್ಗೆ ಕೇರಳ ವಿಶ್ವ ವಿದ್ಯಾನಿಲಯದ ತಜ್ಞರು  ಸಭೆಯಲ್ಲಿ ಮಾಹಿತಿ ನೀಡಿದರು.
ಈಗ ಇರುವ ಪ್ರಕ್ರಿಯೆ ಮೂಲಕ ನಿಷ್ಕ್ರೀಯ  ನಡೆಸುವ ಬಗ್ಗೆ  ಆತಂಕ ವ್ಯಕ್ತಪಡಿಸಿದ್ದರಿಂದ ತಜ್ಞರಿಂದ ವರದಿ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳಲು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು
ಕಾಸರಗೋಡು ಅಭಿವೃದ್ಧಿ  ಪ್ಯಾಕೇಜ್   ವಿಶೇಷ ಅಧಿಕಾರಿ  ಇ . ಪಿ ಜಯರಾಜ್ , ಎಂಡೋ ಸಲ್ಪಾನ್ ಸೆಲ್ ಅಧಿಕಾರಿ ಎಸ್ . ಸಜಿದ್,   ಪುಲ್ಲೂರು – ಪೆರಿಯ ಗ್ರಾಮ ಪಂಚಾಯತ್ ಅಧ್ಯಕ್ಷ ಸಿ .ಕೆ ಅರವಿಂದಾಕ್ಷನ್ , ಕೇರಳ ವಿಶ್ವ ವಿದ್ಯಾನಿಲಯ ಡೀನ್  ಪಿ .ಕೆ ಮಿನಿ,  ಡಾ . ಸುರೇಶ್ ಪಿ . ಆರ್ , ಕೃಷಿ  ವಿ. ವಿ  ತಜ್ಞರಾದ ಎನ್ . ಕೆ ನಿದೀಶ್ ,  ವಿಮಲ್ ಸುಂದರ್,  ಎಸ್ . ಕೃಷ್ಣ ಕುಮಾರ್, ವೈದ್ಯಾಧಿಕಾರಿ  ಗಳಾದ ಡಾ . ಜೋಯ್ ಜೋಸೆಫ್, ಡಾ . ಆಶಾ ಮೇರಿ  ,ಜಿಲ್ಲಾ ಪರಿಸರ ಹೋರಾಟ ಸಮಿತಿ ಪ್ರತಿನಿಧಿ ಗಳಾಗಿ ವಿನಯ್  ಕುಮಾರ್,  ಪಿ ವಿ ಸುಧೀರ್ ಕುಮಾರ್ ಮೊದಲಾದವರು    ಉಪಸ್ಥಿತರಿದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು