ಕಾಸರಗೋಡು : ಉಳಿಯತ್ತಡ್ಕದ ಪೆಟ್ರೋಲ್ ಬಂಕ್ ಗೆ ನುಗ್ಗಿ ದಾಂದಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಇಜ್ಜತ್ ನಗರದ ಹನೀಫ್ ಪಿ . ಎ ( ೨೪) ಮತ್ತು ಚಟ್ಟಂಗುಯಿಯ ಮುಹಮ್ಮದ್ ರಾಫಿ ( ೨೯) ಬಂಧಿತ ಆರೋಪಿಗಳು.
ಶನಿವಾರ ಬೈಕ್ ನಲ್ಲಿ ಬಂದ ಇಬ್ಬರು ೫೦ ರೂ . ಪೆಟ್ರೋಲ್ ಸಾಲ ಕೇಳಿ ನೀಡದಿದ್ದಾಗ ಸಿಬಂದಿಗಳ ಮೇಲೆ ಹಲ್ಲೆ ನಡೆಸಿದ್ದು , ಬಳಿಕ ರಾತ್ರಿ ತಂಡವೊಂದು ಬಂಕ್ ಗೆ ನುಗ್ಗಿ ದಾಂದಲೆ ನಡೆಸಿದ್ದರು.
ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಕೃತ್ಯ ದಲ್ಲಿ ಇನ್ನಷ್ಟು ಮಂದಿ ಶಾಮೀಲಾಗಿದ್ದು ಶೀಘ್ರ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.