News Karnataka Kannada
Monday, April 29 2024
ಕಾಸರಗೋಡು

ಕೆಎಸ್ಆರ್ ಟಿಸಿ ಬಸ್- ಕಾರು ಅಪಘಾತ: ಒಬ್ಬ ಸಾವು, ಇಬ್ಬರಿಗೆ ಗಂಭೀರ

kasargodu road accident
Photo Credit :

ಕಾಸರಗೋಡು :  ಕೆ ಎಸ್ ಆರ್ ಟಿ ಸಿ ಬಸ್ಸು ಮತ್ತು ಕಾರಿನ ನಡುವೆ  ಉಂಟಾದ ಅಪಘಾತದಲ್ಲಿ ಕುಂಬಳೆ ನಿವಾಸಿಯೋರ್ವ  ಓರ್ವ ಮೃತಪಟ್ಟು , ಇಬ್ಬರು ಗಂಭೀರ ಗಾಯಗೊಂಡ ಘಟನೆ ಸೋಮವಾರ ರಾತ್ರಿ ಕಾ ಞ0ಗಾಡ್ ನಲ್ಲಿ ನಡೆದಿದೆ.

kasargodu road accident
ಕೆ ಎಸ್ ಆರ್ ಟಿ ಸಿ ಬಸ್ಸು ಮತ್ತು ಕಾರಿನ ನಡುವೆ ಉಂಟಾದ ಅಪಘಾತ.

ಗಂಭೀರ ಗಾಯ ಗೊಂಡವರನ್ನು  ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ . ರಾತ್ರಿ . 8. 30 ರ ಸುಮಾರಿಗೆ ಕಾ ಞ0ಗಾಡ್ ಸೌತ್ ನಲ್ಲಿ ಅಪಘಾತ ನಡೆದಿದೆ .
ಮೃತಪಟ್ಟವರನ್ನು ಕುಂಬಳೆ ಆರಿಕ್ಕಾಡಿಯ  ಅಲಿ  ( 32)  ಗುರುತಿಸಲಾಗಿದೆ.  ಗಂಭೀರ ಗಾಯಗೊಂಡ ಕುಂಬಳೆ ಯ  ಅಲಿ ( 38) ಸೇರಿದಂತೆ ಇಬ್ಬರು ಗಂಭೀರ ಗಾಯಗೊಂಡಿದ್ದು ,   ಮಂಗಳೂರು ಆಸ್ಪತ್ರೆಯಲ್ಲಿ  ದಾಖಲಿಸಲಾಗಿದೆ . ಇಬ್ಬರೂ ಕಾರು ಪ್ರಯಾಣಿಕರಾಗಿದ್ದಾರೆ.

ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ   ಬಸ್ಸು ಪ್ರಯಾಣಿಕರಾದ ಐವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ನೀಲೇಶ್ವರದಿಂದ ಕಾ ಞ0ಗಾಡ್ ಗೆ ಆಗಮಿಸುತ್ತಿದ್ದ ಬಸ್ಸು ಮತ್ತು ಕುಂಬಳೆಯಿಂದ ಕಣ್ಣೂರಿಗೆ ತೆರಳುತ್ತಿದ್ದ   ಇನೋವಾ ಕಾರಿನ ನಡುವೆ ಅಪಘಾತ ನಡೆದಿದೆ .

ಅಪಘಾತದ ಸುದ್ದಿ ತಿಳಿದು ಸ್ಥಳಕ್ಕಾಮಿಸಿದ ಅಗ್ನಿಶಾಮಕ ದಳದ ಸಿಬಂದಿಗಳು , ಪೊಲೀಸರು , ನಾಗರಿಕರು ಕಾರಿನಲ್ಲಿ ಸಿಲುಕಿದವರನ್ನು ಹೊರ ತೆಗೆದು ಆಸ್ಪತ್ರೆಗೆ ತಲಪಿಸಿದರು . ಅಪಘಾತದ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಗಂಟೆಗೂ ಅಧಿಕ ಸಮಯ ವಾಹನ  ಸಂಚಾರ ಅಸ್ತವ್ಯಸ್ತ ಗೊಂಡಿತ್ತು
ಹೊಸದುರ್ಗ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು , ಹೆಚ್ಚಿನ ತನಿಖೆ  ನಡೆಸುತ್ತಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು