ಕಾಸರಗೋಡು : ಕಾರು ಸರ್ವಿಸ್ ಸೆಂಟರ್ ನಿಂದ ಹಾಡ ಹಗಲೇ ನಗದು ಕಳವು ಗೈದ ಘಟನೆಯೊಂದು ಕಾಸರಗೋಡಿನ ಮಾಣಿ ಕ್ಕೋತ್ ನಲ್ಲಿ ನಡೆದಿದ್ದು, ಘಟನೆಗೆ ಸಂಬಂಧ ಪಟ್ಟಂತೆ ಅಲೆಮಾರಿ ಮಹಿಳೆ ಯೋರ್ವಳನ್ನು ಹೊಸದುರ್ಗ ಠಾಣಾ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಗುಂಡಲ್ ಪೇಟೆಯ ಶಿವಕಾಮಿ ಬಂಧಿತ ಮಹಿಳೆ. ಮಣಿ ಕ್ಕೋತ್ ಪೇಟೆಯಲ್ಲಿ ಕಾರ್ಯಾಚರಿಸುತ್ತಿರುವ ವಿನೋದ್ ಎಂಬವರ ಮಾಲಕತ್ವದ ಕಾರು ಸರ್ವಿಸ್ ಸೆಂಟರ್ ನಿಂದ ಹಾಡ ಹಗಲೇ 50 ಸಾವಿರ ರೂ. ನಗದು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಈಕೆ ಯನ್ನು ಬಂಧಿಸಲಾಗಿದೆ.
ಸರ್ವಿಸ್ ಸೆಂಟರ್ ನ ಇನ್ನೊಂದು ಕೋಣೆಯಲ್ಲಿ ಇಡಲಾಗಿದ್ದ ನಗದನ್ನು ಕಳವು ಮಾಡ ಲಾಗಿತ್ತು. ಬ್ಯಾಗ್ ನಲ್ಲಿದ್ದ ನಗದು ನಾಪತ್ತೆ ಯಾದ ಹಿನ್ನಲೆ ಯಲ್ಲಿ ಸಿ ಸಿ ಟಿ ವಿ ಕ್ಯಾಮಾರ ವನ್ನು ಪರಿ ಶೀಲಿಸಿ ದಾಗ ಮಹಿಳೆ ಯೊಬ್ಬಳು ನಗದು ಕಳವು ಮಾಡುತ್ತಿರುವುದು ಕಂಡು ಬಂದಿದೆ . ಈ ಬಗ್ಗೆ ಹೊಸ ದುರ್ಗ ಪೊಲೀಸರಿಗೆ ದೂರು ನೀಡಲಾಗಿತ್ತು ಈ ಅಲೆಮಾರಿ ಮಹಿಳೆ ಚೆರ್ವ ತ್ತೂರಿ ನಲ್ಲಿ ವಾಸವಾಗಿರುವ ಅಲೆಮಾರಿ ತಂಡ ದವಳೆಂ ದು ಗುರುತು ಪತ್ತೆ ಹಚ್ಚಿದ ಪೊಲೀಸರು ಕೃತ್ಯ ನಡೆದು ಗಂಟೆ ಗಳ ಅವಧಿಯಲ್ಲೇ ಆರೋಪಿ ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.