ಕಾಸರಗೋಡು : ಬೈಕ್ ಅಪಘಾತದಲ್ಲಿ ಅರ್ಚಕ ರೋರ್ವರು ಮೃತಪಟ್ಟ ಘಟನೆ ಕಾಞಂಗಾಡ್ ಎಂಬಲ್ಲಿ ನಡೆದಿದೆ ಚೆರ್ವತ್ತೂರು ಶ್ರೀ ವೀರಭದ್ರ ದೇವಸ್ಥಾನದ ಅರ್ಚಕ ಕೆ ವೆಂಕಟೇಶ್ (50)ಮೃತಪಟ್ಟವರು ಇಂದು ಮುಂಜಾನೆ ದೇವಸ್ಥಾನಕ್ಕೆ ಬೈಕ್ನಲ್ಲಿ ತೆರಳುತ್ತಿದ್ದಾಗ ಅಲಾಮಿಪಲ್ಲಿ ಎಂಬಲ್ಲಿ ಈ ಅಪಘಾತ ನಡೆದಿದೆ .
ಎದುರಿನಿಂದ ತೆರಳುತ್ತಿದ್ದ ಲಾರಿ ಒಮ್ಮೆಲೆ ಬ್ರೇಕ್ ಹಾಕಿ ದಾಗ ಬೈಕ್ ಹಿಂಬದಿಗೆ ಡಿಕ್ಕಿ ಹೊಡೆದು ಈ ಅಪಘಾತ ನಡೆದಿದೆ. ಇವರು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಶ್ರೀಕಾಂತ್ ರವರ ಸಹೋದರರಾಗಿದ್ದಾರೆ ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ