News Karnataka Kannada
Monday, April 29 2024
ಕಾಸರಗೋಡು

ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ಹಣ: ಜಿಲ್ಲಾಧಿಕಾರಿ

Untitled 1
Photo Credit : News Kannada

ಕಾಸರಗೋಡು: ಜಿಲ್ಲೆಯಲ್ಲಿ  ಎಂಡೋಸಲ್ಫಾನ್  ಸಂತ್ರಸ್ತರಿಗೆ ಇದುವರೆಗೆ  285 ಕೋಟಿ  ರೂ . ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ  ಭಂಡಾರಿ ಸ್ವಾಗತ್  ತಿಳಿಸಿದ್ದಾರೆ.

ಕಾಸರಗೋಡು ವಾರ್ತಾ ಇಲಾಖಾ  ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕರೆದ ಪತ್ರಿಕಾ ಗೋಷ್ಠಿಯಲ್ಲಿ  ಮಾಹಿತಿ ನೀಡಿದ ಅವರು , ಸರಕಾರ ಈ ತಿಂಗಳು 200 ಕೋಟಿ  ರೂ . ಮಂಜೂರು  ಮಾಡಿದೆ ಎಂದರು.

ಆರ್ಥಿಕ ನೆರವು ಮತ್ತು ಉಚಿತ ಪಡಿತರ ಸೇರಿದಂತೆ 171 ಕೋಟಿ ರೂ., ವೈದ್ಯಕೀಯ ಸಹಾಯಕ್ಕಾಗಿ 16.83 ಕೋಟಿ ರೂ., ಪಿಂಚಣಿಗಾಗಿ 81.42 ಕೋಟಿ ರೂ., ಪರಿಹಾರ ಯೋಜನೆಗೆ 4.5 ಕೋಟಿ ರೂ., ಶಿಕ್ಷಣ ಸವಲತ್ತುಗಳಿಗೆ 4.44 ಕೋಟಿ ರೂ. ಮತ್ತು ಸಾಲ ಮನ್ನಾಗೆ 6.82 ಕೋಟಿ ರೂ. ಸೇರಿದಂತೆ ವಿವಿಧ ಸವಲತ್ತು ಗಳಿಗಾಗಿ ಸಹಾಯಧನ ನೀಡಿರುವುದಾಗಿ  ಜಿಲ್ಲಾಧಿಕಾರಿ  ತಿಳಿಸಿದರು .

ಪರಿಹಾರ ಧನ ವಿತರಿಸಲು ಆನ್ ಲೈನ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು , ಶೀಘ್ರ ಈ ವ್ಯವಸ್ಥೆ  ಮೂಲಕ ಕಾರ್ಯಗತಗೊಳ್ಳಲಿದ್ದು , ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ನೇರವಾಗಿ ಲಭಿಸಲಿದೆ. ಇದರಿಂದ ಪರಿಹಾರ ಧನ ಪಡೆಯಲು ಜಿಲ್ಲಾಧಿಕಾರಿ ಕಚೇರಿಗೆ ತಲಪುವ ಸಮಸ್ಯೆ ದೂರವಾಗಲಿದೆ ಎಂದು   ಜಿಲ್ಲಾಧಿಕಾರಿ ತಿಳಿಸಿದರು.ಜೂನ್ ಎರಡನೇ ವಾರದಲ್ಲಿ ವಿತರಣೆಯನ್ನು ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು. ಇದರಿಂದ ಎಂಡೋಸಲ್ಫಾನ್ ಪರಿಹಾರಕ್ಕೆ ಅರ್ಹರು ಜಿಲ್ಲಾಧಿಕಾರಿಗಳ ಮೊರೆ ಹೋಗುವುದು ತಪ್ಪಲಿದೆ. ಅಕ್ಷಯ ಕೇಂದ್ರ ಅಥವಾ ಗ್ರಾಮ ಕಚೇರಿ ಮೂಲಕ ಅರ್ಜಿ ಸಲ್ಲಿಸುವುದು. ಮುಂದಿನ ಮೂರು ವಾರಗಳಲ್ಲಿ ಆರ್ಥಿಕ ನೆರವು ಪಡೆಯಲು ಅರ್ಹರ ನ್ನು ಗುರುತಿಸುವ
ಪರೀಕ್ಷೆ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯಲ್ಲಿ 6, 727 ಮಂದಿ ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಯಲ್ಲಿದ್ದಾರೆ. ಈ ಪೈಕಿ 3014 ಮಂದಿಗೆ 1,19,34,00,000 ರೂ.  ಇದುವರೆಗೆ ವಿತರಿಸಲಾಗಿದೆ. ಇನ್ನೂ  3,642 ಜನರು ಪರಿಹಾರಕ್ಕೆ  ಲಭಿಸಬೇಕಿದೆ. ಈ ಪೈಕಿ 733 ಮಂದಿ ಪರಿಹಾರಕ್ಕೆ ಅರ್ಹರು  ಗುರುತಿಸಲಾಗಿದೆ . ಪ್ರಸ್ತುತ ಪಟ್ಟಿಯಿಂದ ಯಾರನ್ನೂ ಹೊರಗಿಟ್ಟಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಎಂಡೋಸಲ್ಫಾನ್ ಪರಿಹಾರ ಸಂತ್ರಸ್ತರನ್ನು ಐದು ಗುಂಪು ಗಳಾಗಿ ವಿಂಗಡಿಸಲಾಗಿದೆ. 371 ಒಳರೋಗಿಗಳಿದ್ದಾರೆ. ಅದರಲ್ಲಿ 269 ಮಂದಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಈ ವರ್ಗದಲ್ಲಿ 102 ಜನರು ಪರಿಹಾರಕ್ಕೆ ಅರ್ಹರಾಗಿದ್ದಾರೆ. ಈ ಪಟ್ಟಿಯಲ್ಲಿ 1,499 ಮಂದಿ ಬುದ್ಧಿಮಾಂದ್ಯರು ಸೇರಿದ್ದಾರೆ. ಈ ಪೈಕಿ ಈಗಾಗಲೇ 1173 ಮಂದಿಗೆ ಪರಿಹಾರ ವಿತರಿಸಲಾಗಿದೆ. ಸದ್ಯ 326 ಮಂದಿ ಹಣ ಪಾವತಿಸಬೇಕಿದೆ. ಅಂಗವಿಕಲರ ವಿಭಾಗದಲ್ಲಿ 1189 ಮಂದಿಯನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. 988 ಮಂದಿಗೆ ಪರಿಹಾರ ವಿತರಿಸಲಾಗಿದೆ. ಈ ವರ್ಗದಲ್ಲಿ 201 ಮಂದಿ ಉಳಿದಿದ್ದಾರೆ. ಪಟ್ಟಿಯಲ್ಲಿ 699 ಕ್ಯಾನ್ಸರ್ ರೋಗಿಗಳು ಸೇರಿದ್ದಾರೆ. 580 ಪರಿಹಾರ ನೀಡಲಾಗಿದೆ. 119 ಉಳಿದಿವೆ. 2969 ವ್ಯಕ್ತಿಗಳು ಐದನೇ ವರ್ಗಕ್ಕೆ ಮತ್ತು ಇತರರು ವರ್ಗಕ್ಕೆ ಸೇರಿದವರು. ಅದರಲ್ಲಿ ನಾಲ್ವರಿಗೆ ಪರಿಹಾರ ನೀಡಲಾಗಿದೆ. 2894 ಉಳಿದಿವೆ.

ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಯಲ್ಲಿ ಸೇರ್ಪಡೆಗೊಂಡ ಎಂಟು ಮಂದಿಗೆ 5 ಲಕ್ಷ ರೂ.ಪರಿಹಾರ ಮಂಜೂರಾಗಿದ್ದು,  ಸಂತ್ರಸ್ಥರಾದ ಕೆ.ಜಿ.ಬೈಜು, ಅಶೋಕ್ ಕುಮಾರ್, ಮಧುಸೂದನನ್, ಪಿ.ಜೆ.ಥಾಮಸ್, ಶಾಂತಾ, ಶಾಂತಾ  ಕೃಷ್ಣನ್, ಸಾಜಿ, ಎಂ.ವಿ.ರವೀಂದ್ರನ್  ರವರಿಗೆ  ಆರ್ಥಿಕ ನೆರವು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ  ವಾರ್ತಾಧಿಕಾರಿ  ಎಂ.ಎಸ್. ಮಧುಸೂದನನ್ ಪತ್ರಿಕಾಗೋಷ್ಠಿಯಲ್ಲಿ  ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು