ಕಾಸರಗೋಡು: ಹಾಡಹಗಲೇ ಮನೆಗೆ ನುಗ್ಗಿದ ಮಹಿಳೆ ಸೇರಿದಂತೆ ಇಬ್ಬರು ಗ್ರಹಿಣಿಗೆ ಚಾಕು ತೋರಿಸಿ ಬೆದರಿಸಿ ಒಂದೂಕಾಲು ಪವನ್ ನ ಚಿನ್ನದ ಬಳೆ ಯನ್ನು ದರೋಡೆಗೈದ ಘಟನೆ ಮಧ್ಯಾಹ್ನ ಉಪ್ಪಳ ಶಾಲೆಯ ಬಳಿ ನಡೆದಿದೆ.
ಉಪ್ಪಳ ಅಂಚಿಕಟ್ಟೆಯ ಬಶೀರ್ ರವರ ಮನೆಯಲ್ಲಿ ಈ ಘಟನೆ ನಡೆದಿದೆ. ಸ್ಕೂಟರ್ ನಲ್ಲಿ ಬಂದ ಇಬ್ಬರು ಮನೆಯೊಳಗೆ ನುಗ್ಗಿ ಚಾಕು ತೋರಿಸಿದ್ದು , ಎಲ್ಲಾ ಚಿನ್ನಾಭರಣವನ್ನು ನೀಡುವಂತೆ ಬೆದರಿಸಿದ್ದಾರೆ. ಭಯಗೊಂಡ ಗ್ರಹಿಣಿ ಕೈಯಲ್ಲಿ ಬಳೆಯನ್ನು ತೆಗೆದು ನೀಡಿದ್ದು , ಈ ಸಂದರ್ಭದಲ್ಲಿ ಮನೆಯೊಳಗಿದ್ದ ಪುತ್ರ ಮಸೀದಿಗೆ ತೆರಳಲೆಂದು ಕೆಳಗೆ ಬಂದಾಗ ಇಬ್ಬರೂ ಚಿನ್ನಾಭರಣ ಸಹಿತ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ತಲಪಿರುವ ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.