ಕಾಸರಗೋಡು : ನಾಪತ್ತೆಯಾಗಿದ್ದ ಖಾಸಗಿ ಹಣಕಾಸು ಸಂಸ್ಥೆಯ ನೌಕರನ ಮೃತದೇಹ ಹೊಳೆಯಲ್ಲಿ ಪತ್ತೆಯಾಗಿದೆ. ನಗರದ ಬ್ಯಾಂಕ್ ರಸ್ತೆಯ ಖಾಸಗಿ ಹಣಕಾಸು ಸಂಸ್ಥೆಯ ನೌಕರ , ಮಲ್ಲ ಗೋಪಾಲಕೊಚ್ಚಿಯ ಹರ್ಷಿತ್ ಕುಮಾರ್ ( ೩೮) ಮೃತಪಟ್ಟವರು.
ಎರಡು ದಿನಗ ಳಿಂದ ನಾಪತ್ತೆಯಾಗಿದ್ದ ಇವರ ಮೃತದೇಹ ಚಂದ್ರಗಿರಿ ಹೊಳೆಯ ತುರುತ್ತಿ ಎಂಬಲ್ಲಿ ಸೋಮವಾರ ಮೃತದೇಹ ಪತ್ತೆಯಾಗಿದೆ.
ರವಿವಾರ ಇವರ ಬೈಕ್ ಚಂದ್ರಗಿರಿ ಸೇತುವೆ ಸಮೀಪ ಪತ್ತೆಯಾಗಿತ್ತು. ಇದರಿಂದ ಸಂಶಯಗೊಂಡು ಅಗ್ನಿಶಾಮಕ ದಳದ ಸಿಬಂದಿಗಳು , ಪೊಲೀಸರು ಹೊಳೆಯಲ್ಲಿ ನಡೆಸಿದ್ದರು. ಆದರೆ ಮೃತದೇಹ ಪತ್ತೆಯಾಗಿರಲಿಲ್ಲ . ಸೋಮವಾರ ತುರುತ್ತಿ ಎಂಬಲ್ಲಿ ಹೊಳೆ ಬದಿ ಮೃತದೇಹ ಪತ್ತೆಯಾಗಿದೆ. ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ . ಕಾಸರಗೋಡು ನಗರ ಠಾಣಾ ಪೊಲೀಸರು ಮಹಜರು ನಡೆಸಿದರು