ಕೊಟ್ಟಿಗೆಹಾರ: ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು ಕವಿದಿದ್ದು ಘಾಟಿಯ ಕೆಲವು ಕಡೆ ರಸ್ತೆ ಕಾಣದೇ ವಾಹನ ಸವಾರರು ಪರದಾಡುವಂತಾಗಿದೆ. ಮಳೆ ಕಡಿಮೆಯಾಗಿದ್ದರೂ ಪ್ರಫಾತದ ಬದಿಯಿಂದ ಬರುವ ಮಂಜು ಮುಸುಕು ರಸ್ತೆಗೂ ಆವರಿಸಿ ಕೆಲವು ಕಡೆ ವಾಹನ ಸವಾರರು ಹೆಡ್ ಲೈಟ್ ಹಾಕಿಕೊಂಡು ವಾಹನ ಚಲಾಯಿಸುತ್ತಿದ್ದಾರೆ.
ಮಳೆಗಾಲವಾದ್ದರಿಂದ ಚಾರ್ಮಾಡಿ ಘಾಟಿಯಲ್ಲಿ ಮಂಜು ಮುಸುಕು ಹಾಕಿರುವುದರಿಂದ ದ್ವಿಚಕ್ರವಾಹನ, ಕಾರು, ಬಸ್ ಮತ್ತಿತರ ವಾಹನಗಳ ಸವಾರರು ಘಾಟ್ ರಸ್ತೆಯಲ್ಲಿ ಲೈಟ್ ಹಾಕಿಕೊಂಡು ವಾಹನ ಚಲಾಯಿಸಬೇಕು.
ಪ್ರವಾಸಿಗರು ಕೂಡ ಎಚ್ಚರಿಕೆಯಿಂದ ಸಂಚರಿಸಬೇಕು ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.