News Karnataka Kannada
Monday, May 20 2024
ಕರಾವಳಿ

ಹೋಬಳಿ ಮಟ್ಟದಲ್ಲೂ ಇಂದಿರಾ ಕ್ಯಾಂಟೀನ್ – ಸಚಿವ ಯು.ಟಿ.ಖಾದರ್ ಭರವಸೆ

Photo Credit :

ಹೋಬಳಿ ಮಟ್ಟದಲ್ಲೂ ಇಂದಿರಾ ಕ್ಯಾಂಟೀನ್ - ಸಚಿವ ಯು.ಟಿ.ಖಾದರ್ ಭರವಸೆ

ಪುತ್ತೂರು: ಬಡ ಜನತೆ ಮತ್ತು ಕೂಲಿ ಕಾರ್ಮಿಕರು ಸೇರಿದಂತೆ ಶ್ರೀಮಂತರು ಕೂಡಾ ಊಟ, ಉಪಹಾರ ಸೇವಿಸುವ ಇಂದಿರಾ ಕ್ಯಾಂಟೀನ್ ಮುಂದೆ ಹೋಬಳಿ ಮಟ್ಟದಲ್ಲೂ ಆರಂಭಗೊಳ್ಳಲಿದೆ ಎಂದು ರಾಜ್ಯ ನಗರಾಭಿವೃದ್ಧಿ, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಹೇಳಿದ್ದಾರೆ.

ರಾಜ್ಯ ಸರಕಾರದ ಯೋಜನೆಯಲ್ಲಿ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಳಿ ನಿರ್ಮಾಣಗೊಂಡ ಇಂದಿರಾ ಕ್ಯಾಂಟೀನ್ನನ್ನು ಅವರು ಮಾ.1ರಂದು ಉದ್ಘಾಟಿಸಿ ಅಲ್ಲಿ ಉಪಹಾರ ಸೇವಿಸಿ ಬಳಿಕ ಪುರಭವನದಲ್ಲಿ ನಡೆದ ಪುತ್ತೂರು ನಗರಸಭೆ, ಕೆಯುಐಡಿಎಫ್ಸಿ. ಜಂಟಿ ಸಹಯೋಗದಲ್ಲಿ ಎಡಿಬಿ ಯೋಜನೆಯಡಿ ಪುತ್ತೂರು ನಗರಕ್ಕೆ ನಿರಂತರ ಕುಡಿಯುವ ನೀರು ಸರಬರಾಜು ಕಾಮಗಾರಿಯ ಶಿಲಾನ್ಯಾಸ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಬಡವರು ಕ್ಯಾಂಟೀನ್ಗೆಂ, ಶ್ರೀಮಂತರು ಹೋಟೇಲ್ಗೆ. ಹೋಗಿ ಊಟ ಮಾಡುವ ಕಾಲವೊಂದು ಇತ್ತು. ಆಗ ಬಡವರು ಅಪ್ಪಿತಪ್ಪಿ ಶ್ರೀಮಂತರ ಹೊಟೇಲ್ಗೆಟ ಹೋಗುತ್ತಿರಲಿಲ್ಲ. ಶ್ರೀಮಂತರು ಕೂಡಾ ಬಡವರ ಹೊಟೇಲ್ಗೆೋ ಹೋಗುತ್ತಿರಲಿಲ್ಲ. ಆದರೆ ನಮ್ಮ ಸರಕಾರ ಬಂದ ಬಳಿಕ ಶ್ರೀಮಂತರು ಕೂಡಾ ಬಡವರ ಹೊಟೇಲ್ಗೆರ ಹೋಗಬೇಕೆಂದು ನಿರ್ಣಯ ಕೈಗೊಂಡಿದ್ದಲ್ಲದೆ, ಜೊತೆಗೆ ಯಾರೂ ಕೂಡಾ ಹಸಿದ ಹೊಟ್ಟೆಯಲ್ಲಿ ದುಡಿಯಬಾರದು, ಕಲಿಯಬಾರದು. ಕಾರ್ಮಿಕರು, ಬಡವರು, ನಿರ್ಗತಿಕರು, ನಾಗರಿಕರ ಹಸಿವು ನೀಗಿಸಬೇಕು.

ಮತ್ತು ಬಡ ನಾಗರಿಕರಿಗೆ ಕಡಿಮೆ ದರದಲ್ಲಿ ತಿಂಡಿ ಊಟ ಕೊಡಬೇಕು ಎಂಬ ನಿಟ್ಟಿನಲ್ಲಿ ಹಿಂದಿನ ಕಾಂಗ್ರೆಸ್ ಸರಕಾರ ಇಂದಿರಾ ಕ್ಯಾಂಟೀನ್ ಮಹತ್ವದ ಯೋಜನೆ ಜಾರಿಗೆ ತಂದಿತ್ತು. ಇವತ್ತು ಪುತ್ತೂರಿನಲ್ಲಿ ಅದು ಉದ್ಘಾಟನೆಗೊಂಡಿದೆ. ತಾಲೂಕು ಬಿಟ್ಟು ಗ್ರಾಮಾಂತರದ ನನ್ನ ಕ್ಷೇತ್ರ ಉಳ್ಳಾಲದಲ್ಲಿ ಮಾತ್ರ ಇಂದಿರಾ ಕ್ಯಾಂಟೀನ್ ಇದೆ. ಈ ನಿಟ್ಟಿನಲ್ಲಿ ಪುತ್ತೂರಿನಲ್ಲೂ ಮುಂದೆ ಹೋಬಳಿ ಮಟ್ಟದಲ್ಲಿ ಇಂದಿರಾ ಕ್ಯಾಂಟೀನ್ ಆಗಲಿದೆ. ಹಸಿವು ನೀಗಿಸಲು ಸಬ್ಸಿಡಿ ದರದಲ್ಲಿ ತಿಂಡಿ-ಊಟ ನೀಡಲಾಗುತ್ತಿದೆ. ಎಲ್ಲಾ ವರ್ಗದ ಜನತೆ ಇಂದಿರಾ ಕ್ಯಾಂಟೀನ್ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

188

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು