ಪುತ್ತೂರು: ಬಡ ಜನತೆ ಮತ್ತು ಕೂಲಿ ಕಾರ್ಮಿಕರು ಸೇರಿದಂತೆ ಶ್ರೀಮಂತರು ಕೂಡಾ ಊಟ, ಉಪಹಾರ ಸೇವಿಸುವ ಇಂದಿರಾ ಕ್ಯಾಂಟೀನ್ ಮುಂದೆ ಹೋಬಳಿ ಮಟ್ಟದಲ್ಲೂ ಆರಂಭಗೊಳ್ಳಲಿದೆ ಎಂದು ರಾಜ್ಯ ನಗರಾಭಿವೃದ್ಧಿ, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಹೇಳಿದ್ದಾರೆ.
ರಾಜ್ಯ ಸರಕಾರದ ಯೋಜನೆಯಲ್ಲಿ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಳಿ ನಿರ್ಮಾಣಗೊಂಡ ಇಂದಿರಾ ಕ್ಯಾಂಟೀನ್ನನ್ನು ಅವರು ಮಾ.1ರಂದು ಉದ್ಘಾಟಿಸಿ ಅಲ್ಲಿ ಉಪಹಾರ ಸೇವಿಸಿ ಬಳಿಕ ಪುರಭವನದಲ್ಲಿ ನಡೆದ ಪುತ್ತೂರು ನಗರಸಭೆ, ಕೆಯುಐಡಿಎಫ್ಸಿ. ಜಂಟಿ ಸಹಯೋಗದಲ್ಲಿ ಎಡಿಬಿ ಯೋಜನೆಯಡಿ ಪುತ್ತೂರು ನಗರಕ್ಕೆ ನಿರಂತರ ಕುಡಿಯುವ ನೀರು ಸರಬರಾಜು ಕಾಮಗಾರಿಯ ಶಿಲಾನ್ಯಾಸ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಬಡವರು ಕ್ಯಾಂಟೀನ್ಗೆಂ, ಶ್ರೀಮಂತರು ಹೋಟೇಲ್ಗೆ. ಹೋಗಿ ಊಟ ಮಾಡುವ ಕಾಲವೊಂದು ಇತ್ತು. ಆಗ ಬಡವರು ಅಪ್ಪಿತಪ್ಪಿ ಶ್ರೀಮಂತರ ಹೊಟೇಲ್ಗೆಟ ಹೋಗುತ್ತಿರಲಿಲ್ಲ. ಶ್ರೀಮಂತರು ಕೂಡಾ ಬಡವರ ಹೊಟೇಲ್ಗೆೋ ಹೋಗುತ್ತಿರಲಿಲ್ಲ. ಆದರೆ ನಮ್ಮ ಸರಕಾರ ಬಂದ ಬಳಿಕ ಶ್ರೀಮಂತರು ಕೂಡಾ ಬಡವರ ಹೊಟೇಲ್ಗೆರ ಹೋಗಬೇಕೆಂದು ನಿರ್ಣಯ ಕೈಗೊಂಡಿದ್ದಲ್ಲದೆ, ಜೊತೆಗೆ ಯಾರೂ ಕೂಡಾ ಹಸಿದ ಹೊಟ್ಟೆಯಲ್ಲಿ ದುಡಿಯಬಾರದು, ಕಲಿಯಬಾರದು. ಕಾರ್ಮಿಕರು, ಬಡವರು, ನಿರ್ಗತಿಕರು, ನಾಗರಿಕರ ಹಸಿವು ನೀಗಿಸಬೇಕು.
ಮತ್ತು ಬಡ ನಾಗರಿಕರಿಗೆ ಕಡಿಮೆ ದರದಲ್ಲಿ ತಿಂಡಿ ಊಟ ಕೊಡಬೇಕು ಎಂಬ ನಿಟ್ಟಿನಲ್ಲಿ ಹಿಂದಿನ ಕಾಂಗ್ರೆಸ್ ಸರಕಾರ ಇಂದಿರಾ ಕ್ಯಾಂಟೀನ್ ಮಹತ್ವದ ಯೋಜನೆ ಜಾರಿಗೆ ತಂದಿತ್ತು. ಇವತ್ತು ಪುತ್ತೂರಿನಲ್ಲಿ ಅದು ಉದ್ಘಾಟನೆಗೊಂಡಿದೆ. ತಾಲೂಕು ಬಿಟ್ಟು ಗ್ರಾಮಾಂತರದ ನನ್ನ ಕ್ಷೇತ್ರ ಉಳ್ಳಾಲದಲ್ಲಿ ಮಾತ್ರ ಇಂದಿರಾ ಕ್ಯಾಂಟೀನ್ ಇದೆ. ಈ ನಿಟ್ಟಿನಲ್ಲಿ ಪುತ್ತೂರಿನಲ್ಲೂ ಮುಂದೆ ಹೋಬಳಿ ಮಟ್ಟದಲ್ಲಿ ಇಂದಿರಾ ಕ್ಯಾಂಟೀನ್ ಆಗಲಿದೆ. ಹಸಿವು ನೀಗಿಸಲು ಸಬ್ಸಿಡಿ ದರದಲ್ಲಿ ತಿಂಡಿ-ಊಟ ನೀಡಲಾಗುತ್ತಿದೆ. ಎಲ್ಲಾ ವರ್ಗದ ಜನತೆ ಇಂದಿರಾ ಕ್ಯಾಂಟೀನ್ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.