ಮೈಸೂರು: ಲಂಚಕ್ಕೆ ಹೊಸ ನೋಟ್ ಬೇಕೆಂದು ಪೀಡಿಸುತ್ತಿದ್ದ ಪಿಡಿಓ ಲಂಚ ಸ್ವೀಕರಿಸುವಾಗ ಎಸಿಬಿ ದಾಳಿಗೆ ಸಿಕ್ಕಿ ಬಿದ್ದಿರುವ ಘಟನೆ ಇಂದು ಬೆಳಗ್ಗೆ ಪಿರಿಯಾಪಟ್ಟಣ ತಾಲ್ಲೂಕಿನ ಹುಣಸವಾಡಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
ಹೊಸ ನೋಟ್ ನಲ್ಲಿ ಲಂಚ ಪಡೆಯುತ್ತಿದ್ದಾಗ ಸಿಕ್ಕಿ ಬಿದ್ದ ಪಿಡಿಓ ಚಂದ್ರಯ್ಯ. ಬಿಲ್ ಕಲ್ಕಟರ್ ರಮೇಶ ಅಟೆಂಡರ್ ಸಿದ್ಧಾರ್ಥ ಇವರುಗಳು ಇಂದಿರಾ ಅವಾಜ್ ಯೋಜನೆಯಲ್ಲಿ ಶ್ರೀನಿವಾಸ್ ಎಂಬುವವರಿಗೆ ಮನೆ ನಿರ್ಮಾಣ ಬಿಲ್ ಮಂಜೂರು ಮಾಡಲು ನಾಲ್ಕು ಸಾವಿರ ರೂ ಹೊಸ ನೋಟುಗಳು ಲಂಚಕೊಡಬೇಕೆಂದು ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಶ್ರೀನಿವಾಸ್ ಎಸಿಬಿಗೆ ದೂರು ನೀಡಿದ್ದು ಇಂದು ಬೆಳಗ್ಗೆ ಪಿಡಿಓ ಚಂದ್ರಯ್ಯನಿಗೆ ಹೊಸ 2 ಸಾವಿರ ರೂಪಾಯಿ ನೋಟಿನ ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದಿದ್ದಾರೆ. ಈ ಸಂಬಂಧ ಎಸಿಬಿ ಎಸ್ಪಿ ಕವಿತಾ ನೇತೃತ್ವದಲ್ಲಿ ಹುಣಸೆವಾಡಿ ಗ್ರಾಮ ಪಂಚಾಯಿತಿಯಲ್ಲಿ ದಾಖಲೆಗಳನ್ನ ಪರಿಶೀಲನೆ ನಡೆಸಿದ್ದಾರೆ.