ಮಂಗಳೂರು: ಕರ್ನಾಟಕ ಸಿಇಟಿ ಪರೀಕ್ಷೆ 2020ರ ಫಲಿತಾಂಶ ಪ್ರಕಟಗೊಂಡಿದ್ದು, ನಗರದ ವಿಕಾಸ್ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸ್ಥಾನ ಗಳನ್ನು ಪಡೆದಿರುತ್ತಾರೆ. ಒಟ್ಟು 211 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಕೃಷಿ ವಿಭಾಗದಲ್ಲಿ ಘನಶ್ಯಾಮ್ ಎಂ ಭಟ್ 353, ಆಶ್ರಿತಾ ಎಂ 501ನೇ ರ್ಯಾಂಕ್ ಪಡೆದಿರುತ್ತಾರೆ.
ಎಂಜಿನಿಯರಿಂಗ್ ವಿಭಾಗದಲ್ಲಿ ಘನಶ್ಯಾಮ್ ಎಂ ಭಟ್ 553ನೇ ರ್ಯಾಂಕ್ ಪಡೆದಿರುತ್ತಾರೆ.
ಅನನ್ಯ ಯಕ್ಕುಂಡಿ, ಭಾಗ್ಯಶ್ರೀ ಎನ್ ಎಂ, ಕೌಸರ್ ಇಬ್ರಾಹಿಂ ಉತ್ತಮ ಶ್ರೇಣಿಯನ್ನು ಪಡೆದಿರುತ್ತಾರೆ. ಫಾರ್ಮಸಿ ವಿಭಾಗದಲ್ಲಿ ಆಶ್ರಿತಾ ಎಂ, ಅಂಜಲಿ ಇ ಡಿ, ಘನಶ್ಯಾಮ್ ಎಂ ಭಟ್ ಉತ್ತಮ ಶ್ರೇಣಿಯನ್ನು ಪಡೆದಿರುತ್ತಾರೆ.
ಕೃಷಿ ವಿಭಾಗದಲ್ಲಿ ಘನಶ್ಯಾಮ್ ಎಂ ಭಟ್ 353, ಆಶ್ರಿತಾ ಎಂ 501ನೇ ರ್ಯಾಂಕ್ ಪಡೆದಿರುತ್ತಾರೆ. ಕೌಸರ್ ಇಬ್ರಾಹಿಂ, ಪ್ರಥಮ್ ಪ್ರಭು, ಸಾಕ್ಷಾ ಭಂಡಾರಿ 2000ದ ಒಳಗಿನ ರ್ಯಾಂಕ್ ನ್ನು ಪಡೆದಿರುತ್ತಾರೆ.
ಪಶುವೈದ್ಯಕೀಯ ವಿಭಾಗದಲ್ಲಿ ಆಶ್ರಿತಾ ಎಂ 760, ಅಂಜಲಿ ಇ ಡಿ 808ನೇ ರ್ಯಾಂಕ್ ಪಡೆದಿರುತ್ತಾರೆ.
ನ್ಯಾಚುರೋಪತಿ ಯೋಗಿಕ್ ಸೈನ್ಸ್ ವಿಭಾಗದಲ್ಲಿ ಆಶ್ರಿತಾ ಎಂ 412, ಅಂಜಲಿ ಇ ಡಿ 527, ಘನಶ್ಯಾಮ್ ಭಟ್ 1330ನೇ ರ್ಯಾಂಕ್ ಪಡೆದಿರುತ್ತಾರೆ. ಇವರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶು ಪಾಲರು, ಬೋಧಕ ಬೋಧಕೇತರ ಸಿಬ್ಬಂದಿಯವರು ಶುಭ ಹಾರೈಸಿರುತ್ತಾರೆ.