ಉಡುಪಿ: ದೇಶ ಕಂಡ ಧೀಮಂತ ನಾಯಕ ಹಾಗೂ ಅಜಾತಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇನ್ನಿಲ್ಲ. ದೆಹಲಿಯ ಐಮ್ಸ್ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿದೆ ವಾಜಪೇಯಿ ಅವರಿಗೆ ಹಿರಿಯ ಯತಿಗಳಾದ ಪೇಜಾವರ ಶ್ರೀಗಳು ಸಂತಾಪ ಸೂಚಿಸಿದ್ದಾರೆ.
ತನ್ನ ಕಳೆದ ಪರ್ಯಾಯದಲ್ಲಿ ಅಟಲ್ ಜಿ ಭಾಗಿಯಾಗಿದ್ದರು ಎಂದು ಶ್ರೀಗಳು ಅವರನ್ನು ಸ್ಮರಿಸಿದರು. ಈ ದೇಶ ಕಂಡ ಧೀಮಂತ ನಾಯಕರಲ್ಲಿ ವಾಜಪೇಯಿ ಕೂಡ ಒಬ್ಬರು. ದೇಶದ ಒಳಿತಿಗಾಗಿ ರಾತ್ರಿ ಹಗಲೆಂದು ದುಡಿದವರು.
ಅವರ ಅಗಲುವಿಕೆ ದೇಶಕ್ಕೆ ದೊಡ್ಡ ಹೊಡೆತ. ಇಂತಹ ನಾಯಕರನ್ನು ಕಳೆದು ನಾವು ನಮ್ಮ ಶಕ್ತಿಯನ್ನು ಕಳೆದುಕೊಂಡಂತೆ ಎಂದು ಸಂತಾಪ ಸೂಚಿಸಿದರು.