News Karnataka Kannada
Monday, May 20 2024
ಕರಾವಳಿ

ಸಾರ್ವಜನಿಕ ಶಾಂತಿಭಂಗ ಆರೋಪ: ಹೊಡೆದಾಡಿಕೊಂಡ ಇಬ್ಬರ ಬಂಧನ

Photo Credit :

ಸಾರ್ವಜನಿಕ ಶಾಂತಿಭಂಗ ಆರೋಪ: ಹೊಡೆದಾಡಿಕೊಂಡ ಇಬ್ಬರ ಬಂಧನ

ಪುತ್ತೂರು : ಹಾರಾಡಿ ಎಂಬಲ್ಲಿ ರಸ್ತೆ ಬದಿಯಲ್ಲಿ ಪರಸ್ಪರ ಹೊಡೆದಾಡಿಕೊಂಡು ಸಾರ್ವಜನಿಕ ಶಾಂತಿ ಭಂಗ ಮಾಡಿದ ಆರೋಪದಲ್ಲಿ ಫೆ.14ರಂದು ಪುತ್ತೂರು ನಗರ ಠಾಣೆಯ ಪೊಲೀಸರು ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಹಾರಾಡಿ ನಿವಾಸಿ ಅಹ್ಮದ್ ಪಿ ಅವರ ಪುತ್ರ ಅಬ್ದುಲ್ ರಝಾಕ್ (56ವ)ಮತ್ತು ಅವರ ಸಹೋದರ ಅಶ್ರಫ್ ಎಂಬವರ ಪುತ್ರ ಮಹಮ್ಮದ್ ಶಾಫಿ.ಎಚ್ (21ವ) ಬಂಧಿತ ಆರೋಪಿಗಳು.

ಆರೋಪಿಗಳಾದ ಅಬ್ದುಲ್ ರಝಾಕ್ ಮತ್ತು ಮಹಮ್ಮದ್ ಶಾಫಿ ಎಂಬವರು ಗುರುವಾರ ಬೆಳಿಗ್ಗೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಹಾರಾಡಿ ರಸ್ತೆ ಬದಿಯಲ್ಲಿ ಪರಸ್ಪರ ಹೊಡೆದಾಡಿಕೊಂಡು, ಅವಾಚ್ಯ ಶಬ್ದಗಳಿಂದ ಪರಸ್ಪರ ನಿಂದಿಸಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರ ಶಾಂತಿಭಂಗ ಎಸಗಿದ ಆರೋಪದಲ್ಲಿ ಪುತ್ತೂರು ನಗರ ಠಾಣೆಯ ಎಸ್ಐ ರುಕ್ಮಯ್ಯ ಮೂಲ್ಯ ಅವರು ಪ್ರಕರಣ ದಾಖಲಿಸಿಕೊಂಡು, ಅವರಿಬ್ಬರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

188

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು