News Karnataka Kannada
Tuesday, May 07 2024
ಕರಾವಳಿ

ರೋಡ್ ರೋಲರ್ ಚಾಲಕನ ನಿರ್ಲಕ್ಷ್ಯ: ಬೆಳ್ತಂಗಡಿಯ ಯುವಕ ಸಾವು

Photo Credit :

ರೋಡ್ ರೋಲರ್ ಚಾಲಕನ ನಿರ್ಲಕ್ಷ್ಯ: ಬೆಳ್ತಂಗಡಿಯ ಯುವಕ ಸಾವು

ಬೆಳ್ತಂಗಡಿ: ರೋಡ್ ರೋಲರ್ ಗೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ವೇಣೂರು ಠಾಣಾ ವ್ಯಾಪ್ತಿಯ ಸುಲ್ಕೇರಿ ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಮೃತ ಯುವಕನನ್ನು ಬೆಳಾಲು ಗ್ರಾಮದ ಎರ್ಮಾಳ ಕೆರೆ ಕೋಡಿ ನಿವಾಸಿ ಶ್ರೀಧರ ಪೂಜಾರಿ-ಶ್ರೀಮತಿ ದಂಪತಿ ಪುತ್ರಜಯಂತ್ (31) ಎಂದುಗುರುತಿಸಲಾಗಿದೆ. ಇವರು ರಾತ್ರಿ ಸಂಬಂಧಿಕರ ಮನೆಯ ಕಾರ್ಯಕ್ರಮವೊಂದಕ್ಕೆ ಗುರುವಾಯನಕೆರೆಯಿಂದ ಕಡೆಯಿಂದ ಬೈಕಿನಲ್ಲಿ ಹೋಗುತ್ತಿದ್ದಾಗ ರಾಜ್ಯ ಹೆದ್ದಾರಿಯಲ್ಲಿನ ಸುಲ್ಕೇರಿ ಎಂಬಲ್ಲಿ ರಸ್ತೆ ಮಧ್ಯೆ ನಿಂತಿದ್ದ ರೋಡ್ ರೋಲರ್ ಗೆ ಡಿಕ್ಕಿ ಹೊಡೆದಿದ್ದಾರೆ. ತೀವ್ರ ಗಾಯಗೊಂಡ ಇವರನ್ನುಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಜಯಂತ್ ಅವರು ವಿಶಾಲ ಎಂಬ ಖಾಸಗಿ ಬಸ್ನಗಲ್ಲಿ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದರು. ರೋಡ್ರೋ್ಲರ್ ರಸ್ತೆ ಮಧ್ಯದಲ್ಲಿ ಕೆಟ್ಟು ನಿಂತಿದ್ದು ಯಾವುದೇ ಮುಂಜಾಗ್ರತೆ ಕ್ರಮವಾಗಿ ಸೂಚನಾ ಫಲಕಗಳನ್ನು ಅಳವಡಿಸದೇ ಇದ್ದುದರಿಂದ ಮತ್ತು ಅದಕ್ಕೆ ರಿಫ್ಲೆಕ್ಟರ್ ಗಳು ಇಲ್ಲದಿದ್ದುದರಿಂದ ಬೈಕ್ ಸವಾರನಿಗೆ ಗೊತ್ತಾಗದೆ ಹೋಗಿದೆ. ಹೀಗಾಗಿ ರೋಡ್ ರೋಲರ್ ನ ಚಾಲಕನ ನಿರ್ಲಕ್ಷತನದಿಂದಾಗಿ ಓರ್ವ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ಜಯಂತ್ ತಂದೆ ತಾಯಿ ಕೂಲಿ ಕೆಲಸ ಮಾಡುತ್ತಿದ್ದು ಒಬ್ಬನೇ ಮಗನಾಗಿದ್ದಾನೆ. ಆತನಿಗೆ ಮದುವೆ ಮಾಡುವ ಇರಾದೆಯನ್ನೂ ಅವರು ಇಟ್ಟುಕೊಂಡಿದ್ದು ಅದಕ್ಕೆ ಸಿದ್ದತೆಯನ್ನೂ ಮಾಡಿಕೊಂಡಿದ್ದರೂ ಎಂದು ಊರವರು ಹೇಳುತ್ತಿದ್ದಾರೆ.

ಯಾವುದೇ ರಿಫ್ಲೆಕ್ಟರ್‍ ಇಲ್ಲದ ದೊಡ್ಡ ಗಾತ್ರದ ರೋಲರನ್ನು ಗುತ್ತಿಗೆದಾರರು ಹೆದ್ದಾರಿ ಮಧ್ಯೆ ನಿಲ್ಲಿಸಿದ್ದೇ ಘಟನೆಗೆ ಕಾರಣಎಂದು ಮೃತನ ಹೆತ್ತವರು ಆರೋಪಿಸಿದ್ದಾರೆ. ಏಕೈಕ ಪುತ್ರನನ್ನು ಕಳೆದುಕೊಂಡಿರುವ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂಬುದು ಮನೆಯವರ ದುಃಖದ ಮಾತಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು