ಕಾರ್ಕಳ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ತಾಲ್ಲೂಕಿನಲ್ಲಿ ಬಿಜೆಪಿಯ ಸುನೀಲ್ ಕುಮಾರ್ ಅವರು ಗೋಪಾಲ್ ಭಂಡಾರಿ ವಿರುದ್ಧ 35605 ಮತಗಳ ಅಂತರದಲ್ಲಿ ಭರ್ಜರಿ ಜಯವನ್ನು ಗಳಿಸಿದ್ದಾರೆ.
2004ರಲ್ಲಿ ಚುನಾವಣೆ ನಡೆದಾಗ ಯುವ ರಾಜಕಾರಣಿ ವಿ. ಸುನಿಲ್ ಕುಮಾರ್ ಅವರು ಗೋಪಾಲ್ ಭಂಡಾರಿಗೆ ಸೋಲುಣಿಸಿ ಬಹು ದೀರ್ಘಕಾಲದ ನಂತರ ಕಾರ್ಕಳ ಕ್ಷೇತ್ರವನ್ನು ಸುನಿಲ್ ಕುಮಾರ್ ಮತ್ತೇ ಬಿಜೆಪಿ ತೆಕ್ಕೆಗೆ ಎಳೆದು ತಂದರು.
2008ರ ಚುನಾವಣೆಯಲ್ಲಿ ಗೋಪಾಲ್ ಭಂಡಾರಿ ಹಾಗೂ ಸುನಿಲ್ ಕುಮಾರ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಸುಮಾರು ಒಂದು ಸಾವಿರ ಮತಗಳಿಂದ ಸುನಿಲ್ ಕುಮಾರ್ ರನ್ನು ಸೋಲಿಸಿ ಮತ್ತೆ ವಿಧಾನಸಭೆಗೆ ಭಂಡಾರಿ ಪ್ರವೇಶಿಸಿದರು.
ಆ ಬಳಿಕ 2013ರ ನಡೆದ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಬಿಜೆಪಿ ಸೋತಾಗ ಸುನೀಲ್ ಕುಮಾರ್ ಕೇತ್ರ ಕಾರ್ಕಳದಲ್ಲಿ ತಾವರೆ ಅರಳಿತು. ಸದ್ಯ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ಸುನಿಲ್ ಕುಮಾರ್ ಕಾರ್ಯನಿರ್ವಹಿಸುತ್ತಿದ್ದಾರೆ.
ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆದಿದ್ದು ಕಾರ್ಕಳದಲ್ಲಿ ನೋಡಬಹುದು. ಇದೀಗ ಮತ್ತೇ ಭಂಡಾರಿ ಜತೆಗೆ ಸ್ಪರ್ಧಿಸಿದ ಸುನೀಲ್ ಕುಮಾರ್ ಗೆಲುವಿನ ನಗೆಯನ್ನು ಚೆಲ್ಲಿದ್ದಾರೆ.
ಸುನೀಲ್ ಕುಮಾರ್ ತನ್ನ ಅಧಿಕಾರವಾಧಿಯಲ್ಲಿ ಕಾರ್ಕಳ ತಾಲ್ಲೂಕಿನ ಬೆಳವಣಿಗೆ ಶ್ರಮ ಪಟ್ಟಿದ್ದು, ಇದೀಗ ಜನತೆ ಮತ್ತೇ ಅಧಿಕಾರದ ಚುಕ್ಕಾಣಿಯನ್ನು ನೀಡಿದ್ದಾರೆ.