ಕಾಸರಗೋಡು: ರೈಲು ಬಡಿದು ಮೂರುವರೆ ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ಕುಂಬಳೆ ಸಮೀಪದ ಮೊಗ್ರಾಲ್ ನಲ್ಲಿ ಇಂದು ಮಧ್ಯಾಹ್ನ ನಡೆದಿದ್ದು . ಸಹೋದರ ಗಂಭೀರ ಗಾಯಗೊಂಡಿದ್ದಾನೆ.
ಮೊಗ್ರಾಲ್ ಕೊಪ್ಪಳದ ಸಿದ್ದಿಕ್ ರವರ ಪುತ್ರ ಬಿಲಾಲ್ ಮೃತಪಟ್ಟ ಬಾಲಕ . ಈತನ ಸಹೋದರ ಇಸ್ಮಾಯಿಲ್ ( ೫ ) ಗಂಭೀರ ಗಾಯಗೊಂಡಿದ್ದು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಪ್ಪಳ ರೈಲ್ವೆ ಹಳಿ ಸಮೀಪ ಇವರ ಮನೆ ಹೊಂದಿದ್ದು , ತಾಯಿ ಮನೆಯಿಂದ ಹೊರಗಡೆ ತೆರಳಿದ್ದ ವೇಳೆ ಇಬ್ಬರು ಹುಡುಕಿಕೊಂಡು ರೈಲು ಹಳಿ ಬಳಿ ಬಂದಿದ್ದಾರೆ. ಈ ಸಂದರ್ಭದಲ್ಲಿ ಮಂಗಳೂರಿನಿಂದ ಕಣ್ಣೂರು ಕಡೆಗೆ ತೆರಳುತ್ತಿದ್ದ ರೈಲು ಬಡಿದು ದುರ್ಘಟನೆ ನಡೆದಿದೆ .
ಕಾಸರಗೋಡು ನಗರ ಠಾಣೆ ಮತ್ತು ರೈಲ್ವೆ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ.