ಮೂಡುಬಿದಿರೆ: ವಿಶ್ವ ಪರಂಪರೆ ಯ ಪವಿತ್ರ ತಾಣ ಗಳಲ್ಲಿ ಒಂದಾದ ಜೈನ ಕಾಶಿ ಮೂಡುಬಿದಿರೆ ಯ ಮಕುಟ ಪ್ರಾಯ ಸಾವಿರ ಕಂಬದ ಬಸದಿ ದೇಶದ ಪ್ರಮುಖ ಜೈನ ಬಸದಿಗಳ ವಾಸ್ತುಶಿಲ್ಪದ ಅಚ್ಚರಿಗಳ ಪೈಕಿ ಮೂರನೇ ಸ್ಥಾನ ಪಡೆದಿದೆ ಎಂದು ಶ್ರೀ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿ ತಿಳಿಸಿದ್ದಾರೆ. ಅತ್ಯಂತ ಸೂಕ್ಷ್ಮ ಕೆತ್ತನೆ ತೀರ್ಥoಕರ ಜಿನ ಬಿಂಬ ಸರ್ವ ಧರ್ಮ ಸಮನ್ವಯ ದ ಅನೇಕ ಕಲ್ಲಿನ ಚಿತ್ತಾರ ಗಳ ಬೆಡಗಿನ ಬಿತ್ತಿ ಚಿತ್ರ ಗಳುಳ್ಳ ವಾಸ್ತು ವೈಭವದ ಬಸದಿಗಳ ಪಟ್ಟಿಯಲ್ಲಿ ಸಾವಿರ ಕಂಬದ ಬಸದಿಯು ರಾಜಾಸ್ಥಾನದ ರಣಾಕ್ಪುರ್ ಬಸದಿ, ದಿಲ್ವಾರಾ ಟೆಂಪಲ್ ನಂತರದ ಸ್ಥಾನದಲ್ಲಿ ಗುರುತಿಸಲ್ಪಟ್ಟಿರುವುದು ದೆಹಲಿಯ ಜೈನ ಸನ್ಸ್ ಮೂಲಕ ಖಚಿತವಾಗಿದೆ ಎಂದು ಶ್ರೀಗಳವರು ತಿಳಿಸಿದ್ದಾರೆ.
ಪ್ರತಿವರ್ಷ ವಿಶ್ವದೆಲ್ಲೆಡೆಯಿಂದ ಶಾಂತಿ ಪ್ರಿಯರು ಕಲಾ ಪ್ರಿಯರು ಈ ಬಸದಿಗೆ ಸಾವಿ ರಾರು ಜನ ಭ ಭೇಟಿ ನೀಡಿ ಸಂತಸ ಪಡುತ್ತಾರೆ ಆದರೆ ಈ ವರ್ಷ ಕೊರೋನಾ ದಿ0ದ ಬಸದಿ ಯಾತ್ರಿಕರಿಲ್ಲದೆ ಸೊರಗಿದೆ. ಸಧ್ಯ ನಿತ್ಯ ತ್ರಿಕಾಲ ಪೂಜೆಯ ವ್ಯೆವಸ್ಥೆ ಮಾಡಲಾಗಿದ್ದು ಪೂಜಾ ಸಮಯದಲ್ಲಿ ಮಾತ್ರ ಬಸದಿ ತೆರೆದಿಡಲಾಗುತ್ತದೆ. ಸಾರ್ವಜನಿಕರಿಗೆ ಕೊರೋನಾ ಆತಂಕ ಇಳಿಮುಖವಾದ ಬಳಿಕ ದರ್ಶನಕ್ಕೆ ಅವಕಾಶವಿರುತ್ತದೆ ಎಂದು ಶ್ರೀಗಳವರು ತಿಳಿಸಿದ್ದಾರೆ.
ಬಸದಿಯ ಸುತ್ತ ಒಳ ಚರಂಡಿ ವ್ಯೆವಸ್ಥೆ, ನೀರಿನ ಸರಾಗವಾಗಿ ಹೊರಗಡೆ ಹೋಗಲು ವ್ಯೆವಸ್ಥೆ ಬಸದಿ ಒಳಾಂಗಣ ಜೀರ್ಣೋದ್ದಾರ ಛಾವಣಿಗೆ ತಾಮ್ರ ಮುಡಾಯಿಸಲು 2018 ರಲ್ಲಿ 2ಕೋಟಿ ಅನುದಾನ ಕರ್ನಾಟಕ ಸರಕಾರ ಘೋಷಣೆ ಮಾಡಿ ಪ್ರವಾಸೋದ್ಯಮ ಇಲಾಖೆಯಿಂದ ಬಿಡುಗಡೆಯಾಗಿತ್ತು. ಆದರೆ ಕೊರೋನಾ ಕಾರಣ ನೀಡಿ ಕಾಮಗಾರಿ ವಿಳಂಬ ವಾಗಿದೆ. ಆದಷ್ಟು ಬೇಗ ಕಾಮಗಾರಿ ಪರಂಪರೆ ಗೆ ಪೂರಕ ವಾಗಿ ಆರಂಭ ಗೊಳ್ಳಲು ಸರಕಾರ ಕ್ರಮ ಕೈಗೊಳ್ಳಬೇಕು ಈ ಬ್ರಹತ್ ಜಿನ ಮಂದಿರ ಮತ್ತೊಮ್ಮೆ ಯಾತ್ರಾರ್ಥಿ ಗಳಿಗೆ ಪ್ರವಾಸಿಗರಿಗೆ ಮೂಲ ಸೌಕರ್ಯ ಒದಗಿಸಿ ಕೊಡಲು ಸರಕಾರ ಸಹಕರಿಸಲಿ ಎಂದು ಶ್ರೀಗಳವರು ಆಶಯ ವ್ಯೆಕ್ತ ಪಡಿಸಿದ್ದಾರೆ