ಮೂಡುಬಿದಿರೆ: ನೀರು ತರಲು ಹೋದ ವಿವಾಹಿತರೊಬ್ಬರು ಅಕಸ್ಮಾತ್ ಬಾವಿಗೆ ಬಿದ್ದು ಸಾವನಪ್ಪಿದ ಘಟನೆ ಕಲ್ಲಬೆಟ್ಟು ಗ್ರಾಮದ ಬರಂಗಾಡಿ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.
ಮೃತ ವ್ಯಕ್ತಿಯನ್ನು ಹೇಮಂತ್ ಕೋಟ್ಯಾನ್(49)ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ ಇವರು ನೀರು ತರಲೆಂದು ಕೊಡಪಾನ ಹಿಡಿದುಕೊಂಡು ತಮ್ಮ ಮನೆ ಬಾವಿ ಬಳಿ ಹೋಗಿದ್ದರು. ಬಾವಿ ದಡದಲ್ಲಿ ನಿಂತಾಗ ಅಕಸ್ಮಾತ್ ಕಾಲು ಜಾರಿ ಬಾವಿಯೊಳಗೆ ಬಿದ್ದು ಸಾವನಪ್ಪಿದ್ದಾರೆ ಎನ್ನಲಾಗಿದೆ. ಇವರಿಗೆ ಒಂದು ಗಂಡು ಒಂದು ಹೆಣ್ಣು ಮಗಳಿದ್ದಾರೆ.
ಮಕ್ಕಳು ಸಂಜೆ ಶಾಲೆ ಬಿಟ್ಟು ಮನೆಗೆ ಬಂದಾಗ ಅಪ್ಪ ಮನೆಯಲ್ಲಿಲ್ಲದಿದ್ದನ್ನು ಗಮನಿಸಿ ಸಂಬಂಧಿಕರಿಗೆ ತಿಳಿಸಿದರೆನ್ನಲಾಗಿದೆ. ನಂತರ ಸಂಬಂಧಿಕರು ಹುಡುಕಾಡಿದಾಗ ಬಾವಿಯ ನೀರಿನಲ್ಲಿ ಶವ ತೇಲುತ್ತಿರುವುದು ಕಂಡು ಬಂತ್ತೆನ್ನಲಾಗಿದೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಅಸೌಖ್ಯದ ಹಿನ್ನೆಲೆಯಲ್ಲಿ ಹೇಮಂತ್ ಅವರ ಪತ್ನಿ ಆರು ತಿಂಗಳ ಹಿಂದಷ್ಟೆ ಸಾವನಪ್ಪಿದ್ದು ಬಳಿಕ ಇವರು ಸ್ವಲ್ಪ ಮಂಕಾಗಿದ್ದರೆನ್ನಲಾಗಿದೆ.