News Karnataka Kannada
Thursday, May 02 2024
ಕರಾವಳಿ

ಮಳೆಯ ಅಬ್ಬರಕ್ಕೆವಿದ್ಯುತ್ ವ್ಯತ್ಯಯ- ಲೈನ್ ಮನ್‌ಗಳು ಸುಸ್ತು

Photo Credit :

ಮಳೆಯ ಅಬ್ಬರಕ್ಕೆವಿದ್ಯುತ್ ವ್ಯತ್ಯಯ- ಲೈನ್ ಮನ್‌ಗಳು ಸುಸ್ತು

ಕಾಸರಗೋಡು: ಗಾಳಿ ಮಳೆಯ ಅಬ್ಬರಕ್ಕೆ ಎಲ್ಲೆಡೆ ವಿದ್ಯುತ್ ಸಮಸ್ಯೆ ಉಂಟಾಗಿದ್ದು, ವಿದ್ಯುತ್ ಇಲಾಖಾ ನೌಕರರು ಬಿಡುವಿಲ್ಲದೆ ಸುಸ್ತಾಗಿದ್ದಾರೆ. ಹಗಲು ರಾತ್ರಿ ಎನ್ನದೆ ನೌಕರರು ದಿನವಿಡೀ ಜೀವ ಕೈಯಲ್ಲಿಟ್ಟು ದುಡಿಯಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ಕಾಞ೦ ಗಾಡ್‌ನಲ್ಲಿ ವಿದ್ಯುತ್ ತಂತಿ ದುರಸ್ತಿ ಸಂದರ್ಭದಲ್ಲಿ ನೌಕರರೊಬ್ಬರು ಕಂಬದ ಮೇಲೆಯೇ ಅಸ್ವಸ್ಥಗೊಂಡ ಘಟನೆ ನಡೆದಿದೆ. ಸೊಂಟಕ್ಕೆ ಹಗ್ಗ ಕಟ್ಟಿ ಕೆಲಸ ನಿರ್ವಹಿಸುತ್ತಿದ್ದುದರಿಂದ ಕಂಬದಿಂದ ಕೆಳಗೆ ಬೀಳದೆ ಅಪಾಯದಿಂದ ಪಾರಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳದ ಸಿಬಂದಿಗಳು ಕಂಬದಲ್ಲಿ ಅಸ್ವಸ್ಥರಾಗಿ ದ್ದ ನೌಕರನನ್ನು ಕೆಳಗಿಳಿಸಿ ಆಸ್ಪತ್ರೆಗೆ ಸಾಗಿಸಿದರು.

ಮಾವುಂಗಾಲ್ ನ ವಿದ್ಯುತ್ ಸೆಕ್ಷನ್ ಕಚೇರಿಯ ಮೋಹನ್ ದಾಸ್ (೩೭) ಅಸ್ವಸ್ಥಗೊಂಡವರು.

ಮಾವುಂಗಾಲ್ ಬಳಿ ಯ ಮೂಲಕಂಡದಲ್ಲಿ ಮರಬಿದ್ದು ತುಂಡಾದ ತಂತಿಯನ್ನು ದುರಸ್ತಿಪಡಿಸುತ್ತಿದ್ದಾಗ ಘಟನೆ ನಡೆದಿದೆ .

ಮೋಹನ್ ದಾಸ್ ಅಲ್ಲದೆ ಇಬ್ಬರು ಇತರ ನೌಕರರು , ಸಬ್ ಇಂಜಿನಿಯರ್ , ಮೇಲ್ವಿಚಾರಕ ಹಾಗೂ ಇಬ್ಬರು ಲೈನ್ ಮೇನ್ ಜೊತೆಗಿದ್ದರು.

ವಿದ್ಯುತ್ ಸಂಪರ್ಕ ವಿಚ್ಛೇಧಿಸಿ ದ ಬಳಿಕ ಕಂಬಕ್ಕೆ ಹತ್ತಿ ವಿದ್ಯುತ್ ತಂತಿ ಯನ್ನು ಎಳೆದು ಕಟ್ಟುತ್ತಿದ್ದಾಗ ಕಂಬದಲ್ಲೇ ಕುಸಿದರು. ಕೂಡಲೇ ಜೊತೆಗಿದ್ದವರು ಮೇಲಕ್ಕೆ ಹತ್ತಿ ಕೆಳಗಡೆ ಬಿಲದಂತೆ ನೋಡಿಕೊಂಡರು. ಸೊಂಟಕ್ಕೆ ಹಗ್ಗ ಕಟ್ಟಿ ಕೆಲಸ ನಿರ್ವಹಿಸುತ್ತಿದ್ದುದರಿಂದ ಅನಾಹುತ ತಪ್ಪಿದೆ ಎನ್ನಬಹುದು .

ಮಳೆ – ಗಾಳಿಗೆ ಜಿಲ್ಲೆಯ ಹಲವೆಡೆ ತಂತಿ ಕಡಿತ , ಕಂಬ ತುಂಡಾದ ಹಾಗೂ ಇನ್ನಿತರ ರೀತಿಯ ವಿದ್ಯುತ್ ಸಮಸ್ಯೆ ಕಂಡು ಬರುತ್ತಿದ್ದು , ಇಲಾಖೆ ನೌಕರರು ಬಿಡುವಿಲ್ಲದ ಕೆಲಸ ಮಾಡಬೇಕಾಗಿ ಬರುತ್ತಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು