ಮಲ್ಪೆ: ಸ್ನಾನಕ್ಕಾಗಿ ಸಮುದ್ರಕ್ಕಿಳಿದ ಬೆಂಗಳೂರಿನ ಪ್ರವಾಸಿಗರೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆಯು ಮಂಗಳವಾರ ಇಲ್ಲಿ ನಡೆದಿದೆ.
ಬೆಂಗಳೂರು ಮೂಲದ ಕೀರ್ತನ್ ಸಿಂಹ(22) ಎಂಬವರು ಮೃತಪಟ್ಟವರು. ಉಳಿದ ನಾಲ್ಕು ಮಂದಿ ಪ್ರವಾಸಿಗರನ್ನು ರಕ್ಷಿಸಲಾಗಿದೆ ಎಂದು ವರದಿಗಳು ಹೇಳಿವೆ.
ಬೆಂಗಳೂರಿನಿಂದ ಬಂದಿದ್ದ ಸುಮಾರು 30 ಮಂದಿಯ ತಂಡವು ಬೀಚ್ ನ ಉತ್ತರ ಭಾಗದಲ್ಲಿ ಸ್ನಾನಕ್ಕೆ ಇಳಿದಿದೆ. ನಾಲ್ಕು ಮಂದಿ ನೀರಿನಲ್ಲಿ ಕೊಚ್ಚಿ ಹೋದ ವೇಳೆ ಜೀವ ರಕ್ಷಕ ತಂಡದವರು ಅವರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.