ಕಾಸರಗೋಡು: ಮನೆಗೆ ನುಗ್ಗಿ ವ್ಯಕ್ತಿಯೋರ್ವನ ಕೊಲೆಗೆತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕಾಸರಗೋಡಿನ ಅಹಮ್ಮದ್ ( 39) ಎಂದು ಗುರುತಿಸಲಾಗಿದೆ. ವಿದ್ಯಾನಗರದ ಮುಹಮ್ಮದ್ ಯೂಸಫ್ ( 62) ಎಂಬವರನ್ನು ತಲೆಗೆ ಬಡಿದು ಕೊಲೆಗೆತ್ನಿಸಿತ್ತು. ಅಕ್ಟೊಬರ್ 26 ರಂದು ರಾತ್ರಿ ಹತ್ತು ಗಂಟೆಗೆ ಘಟನೆ ನಡೆದಿದೆ. ಯೂಸಫ್ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದು, ಪತ್ನಿ ಈ ಹಿಂದೆ ಮೃತಪಟ್ಟಿದ್ದು, ಮಗಳು ಗಲ್ಫ್ ನಲ್ಲಿದ್ದಾಳೆ.ಬೊಬ್ಬೆ ಕೇಳಿ ಸ್ಥಳೀಯರು ಧಾವಿಸಿ ಬಂದಾಗ ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದ್ದು , ಮಂಗಳೂರಿಗೆ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಯಿತು.
ಆಹಮ್ಮದ್ ಆಗಾಗ ಯೂಸಫ್ ರ ಮನೆಗೆ ಬರುತ್ತಿದ್ದು ಈ ಹಿನ್ನಲೆಯಲ್ಲಿ ಪೊಲೀಸರು ಈತನನ್ನು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿ ಕಾಸರಗೋಡಿನಲ್ಲಿ ಮೊಬೈಲ್ ಸರ್ವಿಸ್ ಸೆಂಟರ್ ನಡೆಸುತ್ತಿದ್ದಾನೆ.