News Karnataka Kannada
Sunday, May 12 2024
ಕರಾವಳಿ

ಮಂಗಳೂರಿನಲ್ಲಿ ಹುಚ್ಚ ವೆಂಕಟ್

Photo Credit :

ಮಂಗಳೂರಿನಲ್ಲಿ ಹುಚ್ಚ ವೆಂಕಟ್

ಮಂಗಳೂರು: ನಗರದ ಸುಚಿತ್ರ ಚಿತ್ರ ಮಂದಿರಕ್ಕೆ ಹುಚ್ಚ ವೆಂಕಟ್ ಖ್ಯಾತಿಯ ನಟ ವೆಂಕಟರಾಮನ್ ಭಾನುವಾರ ಭೇಟಿ ನೀಡಿ ಸ್ವತಂತ್ರ ಪಾಳ್ಯ ಚಿತ್ರ ವೀಕ್ಷಿಸಿದರು.

Huccha Venkat to launch own political party!-1
ಈ ಸಂದರ್ಭ ಮಾತನಾಡಿದ ಅವರು, ಮಂಗಳೂರಿನಲ್ಲಿ 500ಕ್ಕೂ ಹೆಚ್ಚು ಜನ ಸೇರುತ್ತಾರೆಂಬ ನಿರೀಕ್ಷೆಯ್ಲಲಿದ್ದೆ, ಆದರೆ ನನ್ನ ನಿರೀಕ್ಷೆ ಸುಳ್ಳಾಯಿತು ಎಂದು ಬೇಸರ ವ್ಯಕ್ತಪಡಿಸಿದರು. ನಾನು 60ನೇ ವಯಸ್ಸಿನವರೆಗೆ ಚಿತ್ರ ರಂಗದಲ್ಲೇ ಸೇವೆ ಸಲ್ಲಿಸುತ್ತೇನೆ. 60ರ ನಂತರ ರಾಜಕೀಯಕ್ಕೆ ಪ್ರವೇಶಿಸಿ ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆ. 48 ಗಂಟೆಯೊಳಗೆ ರಾಜ್ಯದ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದರು.

ಸುಮಾರು 300 ಜನ ತುಂಬಬಹುದಾದ ಸುಚಿತ್ರಾ ಚಿತ್ರಮಂದಿರದಲ್ಲಿ ಕೇವಲ 25ರಿಂದ 30 ಜನ ಮಾತ್ರ  ಪ್ರೇಕ್ಷಕರಿದ್ದರು. ಸ್ವತ್ರಂತ್ರ ಪಾಳ್ಯ ಚಿತ್ರ ನಿರ್ಮಾಪಕ ಹೇಮಂತ್ ಸುವರ್ಣ, ವೆಂಕಟ್ ಶೀರ್ಘ್ರ ತುಳು ಚಿತ್ರದಲ್ಲಿ ಅಭಿನಯಿಸುವ ಸುಳಿವು ನೀಡಿದರು.

ವೆಂಕಟ್ ಅಭಿಮಾನಿ ಬಳಗದ ರವಿ ಆಚಾರ್ಯ, ಸುಮಂತ್, ನೀತು, ಆನ್ ಲೈನ್ ಸಿನಿಮಾ ಪ್ರಚಾರಕ ಸೂರಜ್ ಮಂಗಳೂರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು