News Karnataka Kannada
Thursday, May 09 2024
ಕರಾವಳಿ

ಬಾಲ್ಯ ವಿವಾಹ ತಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ

Photo Credit :

ಬಾಲ್ಯ ವಿವಾಹ ತಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ

ಕಾರವಾರ: ಅಪ್ರಾಪ್ತ ಬಾಲಕಿಗೆ 21 ವರ್ಷದ ಯುವಕನೊಂದಿಗೆ ವಿವಾಹ ಮಾಡಲು ಯತ್ನಿಸಿದ್ದ ಪೋಷಕರನ್ನು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಸೋಮವಾರ ತಡೆದಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಹೆಸ್ಕಾಂ ಸಮೀಪದ ಜಾಮಿಯಾ ಮಸೀದಿಯ ಬಳಿ ಬಾಲ್ಯ ವಿವಾಹಕ್ಕೆ ಯತ್ನ ನಡೆಯುತ್ತಿದೆಯೆಂಬ ಮಾಹಿತಿಯ ಮೇರೆಗೆ ಆಗಮಿಸಿದ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಪದ್ಮಾ ಪಾಟೀಲ್ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು.

ಈ ವೇಳೆ ಬಾಲಕಿಯ ತಾಯಿ ಹಾಗೂ ಬಾಲಕನ ಚಿಕ್ಕಪ್ಪ ಅಪ್ರಾಪ್ತರಿಗೆ ಮದುವೆ ಮಾಡಿಸುವುದಕ್ಕಾಗಿ ಮಸೀದಿಯ ಜಮಾತ್ ಸಮಿತಿಯೊಂದಿಗೆ ಮಾತುಕತೆ ನಡೆಸುತ್ತಿದ್ದರು. ಅದನ್ನು ತಡೆದು, ಪ್ರಕರಣವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ವರ್ಗಾಯಿಸಿದೆವು ಎಂದು ಮಹಿಳಾ ಪೊಲೀಸ್ ಠಾಣೆಯ ಪಿಎಸ್‌ಐ ಸುಜಾತ ತಿಳಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಪದ್ಮಾ ಪಾಟೀಲ್, ಶಿರವಾಡದ ಜಮಾತ್‌ನಲ್ಲಿ ಬಾಲ್ಯ ವಿವಾಹ ನಡೆಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಅಲ್ಲಿಗೆ ತೆರಳಿದ್ದೆವು. ಆದರೆ ಅಲ್ಲಿಂದ ಅದನ್ನು ಜಾಮಿಯ ಮಸೀದಿಯ ಕಾರವಾರ ಜಮಾತ್‌ಗೆ ವರ್ಗಾಯಿಸಿದ್ದರು. ಅಲ್ಲಿಗೆ ತೆರಳಿದಾಗ ಅಪ್ರಾಪ್ತರ ಪೋಷಕರು ಬಾಲ್ಯ ವಿವಾಹದ ಕುರಿತಾಗಿ ಮಾತುಕತೆ ನಡೆಸುತ್ತಿದ್ದರು ಎಂದು ತಿಳಿಸಿದರು.

ಅವರೆಲ್ಲರನ್ನೂ ತಡೆದು, ಜಮಾತ್ ಸಮಿತಿಯ ಪದಾಧಿಕಾರಿಗಳು, ಅಪ್ರಾಪ್ತಳು ಹಾಗೂ ಅವರ ಪಾಲಕ, ಪೋಷಕರಿಂದ ಮುಚ್ಚಳಿಕೆ ಬರೆಯಿಸಿಕೊಳ್ಳಲಾಗಿದೆ. ವಿವಾಹಕ್ಕಿರುವ ವಯಸ್ಸನ್ನು ಮೀರಿ ಅವರಿಗೆ ಮದುವೆ ಮಾಡಿಸದಂತೆ ಎಚ್ಚರಿಕೆ ನೀಡಲಾಗಿದೆ. ಬಾಲಕಿಯನ್ನು ಆಕೆಯ ಮನೆಗೆ ಕಳುಹಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು