News Karnataka Kannada
Saturday, May 04 2024
ಕರಾವಳಿ

ಪುತ್ತೂರು ಡಿಪ್ಲೋಮಾ ವಿದ್ಯಾರ್ಥಿ ನಾಪತ್ತೆ

Photo Credit :

ಪುತ್ತೂರು ಡಿಪ್ಲೋಮಾ ವಿದ್ಯಾರ್ಥಿ ನಾಪತ್ತೆ

ಪುತ್ತೂರು: ನೆಹರೂನಗರ ಪಿ.ಜಿಯಲ್ಲಿ ವಾಸ್ತವ್ಯ ಹೊಂದಿದ್ದ ಡಿಪ್ಲೋಮ ವಿದ್ಯಾರ್ಥಿಯೋರ್ವರು ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೂ ಹೋಗದೆ ಇತ್ತ ಕಾಲೇಜಿಗೂ ಬಾರದೆ ನಾಪತ್ತೆಯಾದ ಘಟನೆಯ ಕುರಿತು ವಿದ್ಯಾರ್ಥಿಯ ತಂದೆ ಪುತ್ತೂರು ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಗುಂಡ್ಯ ಸಿರಿಬಾಗಿಲು ನಿವಾಸಿ ಸಂತೋಷ್ ಎಂಬವರ ಪುತ್ರ ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ದ್ವಿತೀಯ ಡಿಪ್ಲೋಮೊ ವಿದ್ಯಾರ್ಥಿ ಆದರ್ಶ್(20ವ)ಅವರು ನಾಪತ್ತೆಯಾದವರು. ಆದರ್ಶ್ ಅವರು ನೆಹರುನಗರ ಗೋಪಾಲ್ ಪೂಜಾರಿ ಎಂಬವರು ನಡೆಸುತ್ತಿರುವ ಪಿ.ಜಿಯಲ್ಲಿ ಉಳಿದು ಕೊಂಡು ಕಾಲೇಜಿಗೆ ಹೋಗುತ್ತಿದ್ದರು. ಪಿ.ಜಿಯಲ್ಲಿ ಒಟ್ಟು 7 ಮಂದಿ ಜೊತೆಯಾಗಿ ಇರುತ್ತಿದ್ದವರ ಪೈಕಿ ಆದರ್ಶ್ ಅವರು ಅ.22ರಂದು ಮನೆಗೆ ಹೋಗುವುದಾಗಿ ತನ್ನ ಸ್ನೇಹಿತರ ಮತ್ತು ಪಿ.ಜಿಯ ಮಾಲಕರಲ್ಲಿ ಹೇಳಿ ಹೋಗಿದ್ದರು. ಈ ನಡುವೆ ಆತ ಮನೆಗೆ ಹೋಗಿರಲಿಲ್ಲ. ಇತ್ತ ಕಡೆ ಕಾಲೇಜಿಗೂ ಗೈರಾಗಿರುವ ಕಾರಣ ಕಾಲೇಜಿನಿಂದ ಆದರ್ಶ್ ಮನೆಗೆ ಕರೆ ಮಾಡಿ ಆದರ್ಶ್ ಕಾಲೇಜಿಗೆ ಬಾರದಿರುವುದನ್ನು ವಿಚಾರಿಸಿದಾಗ ಆದರ್ಶ್ ಅವರು ಮನೆಗೂ ಹೋಗದಿರುವುದು ಬೆಳಕಿಗೆ ಬಂದಿದೆ. ಆದರ್ಶ್ ತಂದೆ ಸಂತೋಷ್ ಅವರು ತನ್ನ ಪುತ್ರ ನಾಪತ್ತೆಯಾಗಿರುವ ಕುರಿತು ಸಂಬಂಧಿಕರ ಮತ್ತು ಕಾಲೇಜಿನಲ್ಲಿ ವಿಚಾರಿಸಿದ ಬಳಿಕ ಅ.24ರಂದು ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
185

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು