ಪುತ್ತೂರು: ಪಾಣಾಜೆ ಕಲ್ಲಪದವು ಎಂಬಲ್ಲಿ ಗಂಡ ತನ್ನ ಪತ್ನಿಗೆ ಚೂರಿ ಇರಿದು ಕೊಲೆ ಮಾಡಿದ ಘಟನೆ ಜು.೧೮ ರ ತಡ ರಾತ್ರಿ ನಡೆದ ಬಗ್ಗೆ ವರದಿಯಾಗಿದೆ.
ಕಲ್ಲದವು ಕಾಲೋನಿ ನಿವಾಸಿ ಗಣೇಶ್ ಎಂಬವರ ಪತ್ನಿ ಅಕ್ಷತಾ(೨೨ವ) ಮೃತಪಟ್ಟವರು. ಗಣೇಶ್ ಎಂಬವರು ರಾತ್ರಿ ಪತ್ನಿ ಅಕ್ಷತಾಗೆ ಹಲ್ಲೆ ಮಾಡಿದ್ದಾರೆ.
ಗಂಭೀರ ಗಾಯಗೊಂಡ ಅಕ್ಷತಾ ಅವರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಆರೋಪಿ ಗಣೇಶ್ ತಲೆಮರೆಸಿಕೊಂಡಿದ್ದಾರೆ.