ಪುತ್ತೂರು: ತೈಲ ಉತ್ಪನ್ನಗಳ ಬೆಲೆ ಏರಿಕೆ ವಿರೋದಿಸಿ ಕಾಂಗ್ರೇಸ್ ಕರೆ ನೀಡಿರುವ ಸೆ.10ರ ಭಾರತ್ ಬಂದ್ ಗೆ ಪುತ್ತೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆ.ಎಸ್.ಆರ್.ಟಿ.ಸಿ ಹಾಗೂ ಖಾಸಗಿ ಬಸ್ಸು ಗಳು ಸಂಚಾರವನ್ನು ಸ್ಥಗಿತಗೊಳಿಸಿವೆ.
ಕೆಲವು ಅಂಗಡಿ ಮುಂಗಟ್ಟಿನವರು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚಿ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಈ ನಡುವೆ ಕೆಲವರು ಬಲವಂತದ ಬಂದ್ಗೆ ಮುಂದಾದಾಗ ಪೊಲೀಸರು ಮಧ್ಯೆ ಪ್ರವೇಶಿಸಿ ತಡೆದಿದ್ದು, ಬಳಿಕ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆದ ಘಟನೆಯೂ ನಡೆಯಿತು.