ಬೆಳ್ತಂಗಡಿ: ಕುತ್ಲೂರಿನಲ್ಲಿ ನಾಲ್ಕು ವರ್ಷಗಳ ಹಿಂದೆ ಕಾರು ಹಾಗೂ ಬೈಕಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಕ್ಸಲ್ ನಾಯಕ ಶಿವಕುಮಾರ್ ಯಾನೆ ಚಿನ್ನಿರಮೇಶ್ ಯಾನೆ, ಸಮೀರ್ ಯಾನೆ, ರಫೀ ಎಂಬಾತನನ್ನು (52) ಗುರುವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಲಯ ಕಸ್ಟಡಿ ವಿಧಿಸಿದೆ.
2013 ನ 8ರಂದು ಕುತ್ಲೂರು ಕುಕ್ಕುಜೆ ನಿವಾಸಿ ರಾಮಚಂದ್ರ ಭಟ್ ಎಂಬರವ ಮನೆಗೆ ಶಸ್ತ್ರಾಧಾರಿ ಶಂಕಿತ ನಕ್ಸಲರ ತಂಡವೊಂದು ರಾತ್ರಿ ಬಂದು ಕಾರು ಬೈಕಿಗೆ ಬೆಂಕಿ ಹಚ್ಚಿದ್ದು ಇದರಂತೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ 2016 ಸೆ. 11ರಂದು ಬೆಂಗಳೂರಿನಲ್ಲಿ ಆಂದ್ರ ಪೋಲಿಸರಿಗೆ ಬಂಧಿತನಾಗಿ ಕರ್ನಾಟಕ ಪೋಲಿಸರಿಗೆ ಹಸ್ತಾಂತರಗೊಂಡಿದ್ದ ಶಿವಕುಮಾರ್ ಯಾನೆ ಚಿನ್ನಿ ರಮೇಶ್ನನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೇಣೂರು ಪೋಲಿಸರು ತನಿಖೆಗಾಗಿ ವಶಕ್ಕೆ ನೀಡುವಂತೆ ನ್ಯಾಯಲಯಕ್ಕೆ ಮನವಿ ಮಾಡಿದ್ದರು. ಇದರಂತೆ ಕಳೆದ ಮಂಗಳವಾರ ನ್ಯಾಯಲಯ ವೇಣೂರು ಪೋಲಿಸರಿಗೆ ಹಸ್ತ್ತಾಂತರಿಸಿದ್ದು ಇದರಂತೆ ಈತನನ್ನು ಬುಧವಾರ ಕುತ್ಲೂರು ಪ್ರದೇಶಕ್ಕೆ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಈ ಕೃತ್ಯದಲ್ಲಿ ನಾನು ಭಾಗಿಯಾಗಿಲ್ಲ ನಮ್ಮ ಸಂಘಟನೆಯ ಬೇರೆ ಸದಸ್ಯರ ಕೃತ್ಯ ಆಗಿರಬಹುದು ಎಂದು ಹೇಳಿಕೆ ಕೊಟ್ಟಿದ್ದ. ಗುರುವಾರ ಆತನನ್ನು ಪೋಲಿಸರು ನ್ಯಾಯಲಯಕ್ಕೆ ಹಾಜರು ಪಡಿಸಿದ್ದಾರೆ.