News Karnataka Kannada
Friday, May 10 2024
ಕರಾವಳಿ

ನಕ್ಸಲ್ ನಾಯಕ ಶಿವಕುಮಾರ್ ನ್ಯಾಯಾಲಯಕ್ಕೆ ಹಾಜರು

Photo Credit :

ನಕ್ಸಲ್ ನಾಯಕ ಶಿವಕುಮಾರ್ ನ್ಯಾಯಾಲಯಕ್ಕೆ ಹಾಜರು

ಬೆಳ್ತಂಗಡಿ: ಕುತ್ಲೂರಿನಲ್ಲಿ ನಾಲ್ಕು ವರ್ಷಗಳ ಹಿಂದೆ ಕಾರು ಹಾಗೂ ಬೈಕಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಕ್ಸಲ್ ನಾಯಕ ಶಿವಕುಮಾರ್ ಯಾನೆ ಚಿನ್ನಿರಮೇಶ್ ಯಾನೆ, ಸಮೀರ್ ಯಾನೆ, ರಫೀ ಎಂಬಾತನನ್ನು (52) ಗುರುವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಲಯ ಕಸ್ಟಡಿ ವಿಧಿಸಿದೆ.

2013 ನ 8ರಂದು ಕುತ್ಲೂರು ಕುಕ್ಕುಜೆ ನಿವಾಸಿ ರಾಮಚಂದ್ರ ಭಟ್ ಎಂಬರವ ಮನೆಗೆ ಶಸ್ತ್ರಾಧಾರಿ ಶಂಕಿತ ನಕ್ಸಲರ ತಂಡವೊಂದು ರಾತ್ರಿ ಬಂದು ಕಾರು ಬೈಕಿಗೆ ಬೆಂಕಿ ಹಚ್ಚಿದ್ದು ಇದರಂತೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ 2016 ಸೆ. 11ರಂದು ಬೆಂಗಳೂರಿನಲ್ಲಿ ಆಂದ್ರ ಪೋಲಿಸರಿಗೆ ಬಂಧಿತನಾಗಿ ಕರ್ನಾಟಕ ಪೋಲಿಸರಿಗೆ ಹಸ್ತಾಂತರಗೊಂಡಿದ್ದ ಶಿವಕುಮಾರ್ ಯಾನೆ ಚಿನ್ನಿ ರಮೇಶ್ನನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ವೇಣೂರು ಪೋಲಿಸರು ತನಿಖೆಗಾಗಿ ವಶಕ್ಕೆ ನೀಡುವಂತೆ ನ್ಯಾಯಲಯಕ್ಕೆ ಮನವಿ ಮಾಡಿದ್ದರು. ಇದರಂತೆ ಕಳೆದ ಮಂಗಳವಾರ ನ್ಯಾಯಲಯ ವೇಣೂರು ಪೋಲಿಸರಿಗೆ ಹಸ್ತ್ತಾಂತರಿಸಿದ್ದು  ಇದರಂತೆ ಈತನನ್ನು ಬುಧವಾರ ಕುತ್ಲೂರು ಪ್ರದೇಶಕ್ಕೆ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಈ ಕೃತ್ಯದಲ್ಲಿ ನಾನು ಭಾಗಿಯಾಗಿಲ್ಲ ನಮ್ಮ ಸಂಘಟನೆಯ ಬೇರೆ ಸದಸ್ಯರ ಕೃತ್ಯ ಆಗಿರಬಹುದು ಎಂದು ಹೇಳಿಕೆ ಕೊಟ್ಟಿದ್ದ. ಗುರುವಾರ ಆತನನ್ನು ಪೋಲಿಸರು ನ್ಯಾಯಲಯಕ್ಕೆ ಹಾಜರು ಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು