ಮಂಗಳೂರು: ಈ ವರ್ಷದ ಜನವರಿ 3ರಂದು ಕಾಟಿಪಳ್ಳದಲ್ಲಿ ಹಾಡಹಗಲೇ ಕೊಲೆಯಾಗಿದ್ದ ದೀಪಕ್ ರಾವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಮಂದಿ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ದೀಪಕ್ ರಾವ್ ಹತ್ಯೆಯ ಬಳಿಕ ಜಿಲ್ಲೆಯು ಬೂದಿ ಮುಚ್ಚಿದ ಕೆಂಡದಂತಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.
ಪ್ರಕರಣದ ಆರೋಪಿಗಳಾಗಿರುವ ರಿಜ್ವಾನ್, ಮೊಹಮ್ಮದ್ ನೌಶಾದ್, ಮೊಹಮ್ಮದ್ ನವಾಜ್, ಮೊಹಮ್ಮದ್ ಇರ್ಫಾನ್, ಅಬ್ದುಲ್ ಅಜೀಜ್, ಅಬ್ದುಲ್ ಅಜೀಮ್, ಮೊಹಮ್ಮದ್ ರಫೀಕ್, ಇರ್ಪಾಣ್, ಮೊಹಮ್ಮದ್ ಅನಸ್, ಮೊಹಮ್ಮದ್ ಝಹೀದ್, ಹಿದಾಯತುಲ್ಲಾ, ಇಮ್ರಾನ್, ಸಫ್ವಾನ್ ವಿರುದ್ಧ ಎಸಿಪಿ ಮಂಜುನಾಥ್ ಶೆಟ್ಟಿ ನೇತೃತ್ವದ ತನಿಖಾ ತಂಡವು ಸುಮಾರು 500 ಪುಟಗಳ ಚಾರ್ಜ್ ಶೀಟ್ ದಾಖಲಿಸಿದೆ.