News Karnataka Kannada
Saturday, May 04 2024
ಕರಾವಳಿ

ಕೊಂಕಣಿ ಭಾಷೆ ಮತ್ತು ಸಾಹಿತ್ಯ ಅಂತರ್ಜಾಲ ಗೋಷ್ಠಿ

Webinar Mng 12 7 21
Photo Credit :

ಮಂಗಳೂರು ; ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ‘ಕೊಂಕಣಿ ಸಂವಾದ ಜಾಲಗೋಷ್ಠಿ’ ಸರಣಿಯ ಎರಡನೇಯ ಉಪಾಖ್ಯಾನವು ತಾರೀಕು ಜುಲೈ ೧೦ ರಂದು ಜರುಗಿತು. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈಯವರು ಸ್ವಾಗತಿಸಿದರು.
ವಿಶ್ವ ಕೊಂಕಣಿ ಕೇಂದ್ರ ‘ಶಾಲೆಯಲ್ಲಿ ಕೊಂಕಣಿ ಶಿಕವಣ’ ವಿಭಾಗದ ಮುಖ್ಯಸ್ತರಾದ ಪ್ರೊ. ಡಾ. ಕಸ್ತೂರಿ ಮೋಹನ ಪೈಯವರು ಕೊಂಕಣಿ ಭಾಷೆಯ ಸಂಸ್ಕೃತ ಮತ್ತು ಪ್ರಾಕೃತ ಸಂಬಂಧಗಳ ವಿಷಯದ ಬಗ್ಗೆ ಪ್ರಸ್ತಾವನೆ ಮಾಡಿದರು.
ಕೇರಳ ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ ಶ್ರೀ ಪಯ್ಯನೂರು ರಮೇಶ ಪೈ ಯವರು ‘ಕೇರಳ ರಾಜ್ಯದಲ್ಲಿ ಕೊಂಕಣಿ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಉಪನ್ಯಾಸವನ್ನು ನೀಡಿದರು.ಇಂಗ್ಲೆಂಡಿನಲ್ಲಿ ನೆಲೆಸಿರುವ ಶ್ರೀಮತಿ ಶಾಂಭವಿ ಕಾಮತ ಹಾಗೂ ಶ್ರೀ ಜಯನಾರಾಯಣ ಭಟ್ಟ ಇವರು ಇಂಗ್ಲೆಂಡ ದೇಶದಲ್ಲಿ ನೆಲೆನಿಂತ ಕೊಂಕಣಿಗರು ಅಲ್ಲಿ ಭಾಷೆಯನ್ನು ಉಳಿಸಿ ಬೆಳೆಸಿದ ಕುರಿತಾಗಿ ಹಾಗೂ ಅಲ್ಲಿ ಕೊಂಕಣಿ ಮಕ್ಕಳಿಗಾಗಿ ಹಮ್ಮಿಕೊಂಡ ಹಲವಾರು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ಶ್ರೀ ವೆಂಕಟೇಶ ಎನ್. ಬಾಳಿಗಾರವರು ಕಾರ್ಯಕ್ರಮವನ್ನು ನಿರ್ವಹಿಸಿ ವಂದನಾರ್ಪಣೆ ಮಾಡಿದರು. ಮಂಗಳೂರು, ಉಡುಪಿ, ಕಾರವಾರ, ಕುಮಟಾ ಹಲವು ಪ್ರದೇಶಗಳಿಂದ ಕೊಂಕಣಿ ಶಿಕ್ಷಕರು ಹಾಗೂ ಗಣ್ಯರು ಗೂಗಲ್ ಮೀಟ ಅಂತರ್ಜಾಲದ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು