ಮಂಗಳೂರು ; ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2021-22 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಪುಸ್ತಕ ಪ್ರಕಟಣೆ ಯೋಜನೆಯಡಿ ಕೊಂಕಣಿ ಸ್ವರಚಿತ ಪುಸ್ತಕಗಳ ಪ್ರಕಟಣೆಗೆ ಅರ್ಜಿ ಆಹ್ವಾನಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅಕಾಡೆಮಿ ಕೊಂಕಣಿ ಕಥೆ, ಕಾದಂಬರಿ, ಲೇಖನ, ಕವನ, ಭಾಷಾಂತರ ಇನ್ನಿತರ ರೂಪದ ಪುಸ್ತಕಗಳ ಬಗ್ಗೆ ಅರ್ಜಿ ಸ್ವೀಕರಿಸಲಾಗುವುದು. ಭಾಷಾಂತರ, ಅನುವಾದಿತ, ಲಿಪ್ಯಾಂತರ ಕೃತಿಗಳಾಗಿದ್ದಲ್ಲಿ ಮೂಲ ಪ್ರತಿಯೊಂದಿಗೆ ಬೆರಳಚ್ಚು ಮಾಡಿರುವ ಪ್ರತಿಯನ್ನು ಅರ್ಜಿಯೊಂದಿಗೆ ಸಲ್ಲಿಸುವುದು. ಸಾಹಿತ್ಯಾಸಕ್ತರಿಗೆ ಅಕಾಡೆಮಿಯ ಈ ಯೋಜನೆಯ ಪ್ರಯೋಜನ ಪಡೆಯಲು ತಿಳಿಸಲಾಗಿದೆ. ಆಗಸ್ಟ್ 30 2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿ ಕಚೇರಿಯನ್ನು ಅಥವಾ ಅಕಾಡೆಮಿ ಕಚೇರಿ ದೂರವಾಣಿ 0824 2453167 ಯನ್ನು ಸಂಪರ್ಕಿಸಲು ಕೋರಲಾಗಿದೆ.