ಮಂಗಳೂರು ; ಇಲ್ಲಿನ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಫಯರ್ ಆ್ಯಂಡ್ ಸೇಫ್ಟಿ ಇಂಜಿನಿಯರಿಂಗ್ನಲ್ಲಿ ದಿನಾಂಕ 24 ಜುಲೈ 2021ರಂದು ವಿದ್ಯಾರ್ಥಿಗಳು ಮತ್ತು ನಾಗರಿಕರಿಗಾಗಿ ವಿಶೇಷ ಕೋವಿಡ್-19 ಪ್ರಥಮ ಲಸಿಕೆ ಅಭಿಯಾನ ಏರ್ಪಡಿಸಲಾಯಿತು. ವೆಲೆನ್ಸಿಯಾ ಕಾರ್ಪೋರೇಟರ್ ಸಂದೀಪ್ ಗರೋಡಿ ಮತ್ತು ಜೆಪ್ಪಿನಮೊಗರು ಕಾರ್ಪೋರೇಟರ್ ವೀಣಾ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಮನೋಜ್ ಮತ್ತು ನಾಗರಿಕ ಮುಖಂಡರ ಸಹಯೋಗದೊಂದಿಗೆ ನಡೆದ ಈ ಅಭಿಯಾನದಲ್ಲಿ ವಿದ್ಯಾರ್ಥಿಗಳು ಮತ್ತು ನಾಗರಿಕರು ಸೇರಿದಂತೆ 200ಕ್ಕಿಂತಲೂ ಅಧಿಕ ಕೋವಿಡ್-19 ಪ್ರಥಮ ಲಸಿಕೆಯನ್ನು ಯಶಸ್ವಿಯಾಗಿ ನೀಡಲಾಯಿತು. ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಯಶವಂತ್ ಗೋಪಾಲ್ ಶೆಟ್ಟಿ ಮತ್ತು ಜಗದೀಶ್ ಪಂಪ್ವೆಲ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ರಾಜೇಶ್ ಮತ್ತು ತಾಲೂಕು ಆರೋಗ್ಯ ಅಧಿಕಾರಿ ಡಾ| ಸಂಜಯ್ ಭಂಡಾರಿಯವರ ನೇತೃತ್ವದಲ್ಲಿ ಸಂಸ್ಥೆಯ ಗ್ರಂಥಾಲಯದಲ್ಲಿ ಕೋವಿಡ್ -19 ಮುಂಜಾಗೃತಾ ಕ್ರಮಗಳು ಮತ್ತು ಸಾಮಾಜಿಕ ಅಂತರ ಪಾಲಿಸುವುದರಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಸಹಕರಿಸಿ ಯಶಸ್ವಿಗೊಳಿಸಿದರು.
ಸರಕಾರ ಮತ್ತು ಜಿಲ್ಲಾಡಳಿತದ ನಿರ್ದೇಶನದಂತೆ ನಿರ್ಬಂಧಿತ ದಿನದೊಳಗಾಗಿ 2ನೇ ಹಂತದ ಲಸಿಕೆಯನ್ನು ಕೂಡ ಇದೇ ವಿದ್ಯಾಸಂಸ್ಥೆಯಲ್ಲಿ ನೀಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ವಿನೋದ್ ಜ್ಹಾನ್ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.