ಮಂಗಳೂರು: ನಗರದಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಜೋರಾಗಿಯೇ ನಡೆಯುತ್ತಿದ್ದರೆ ಕುಂಪಲದಲ್ಲಿ ಹುಲಿವೇಷಧಾರಿಯೊಬ್ಬರ ಮೃತದೇಹ ಬಾವಿಯಲ್ಲಿ ಇಂದು ಪತ್ತೆಯಾಗಿದೆ.
ಹುಲಿ ವೇಷಧಾರಿಯನ್ನು ವಸಂತ್ ಗರೋಡಿ ಎಂದು ಗುರುತಿಸಲಾಗಿದೆ.
ಹುಲಿ ವೇಷ ಹಾಕಿಕೊಂಡ ಸ್ಥಿತಿಯಲ್ಲಿಯೇ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು ಕಾಲು ಜಾರಿ ಬಾವಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.