News Karnataka Kannada
Monday, April 29 2024
ಕರಾವಳಿ

ಕಾಸರಗೋಡು ಹಿಂಸಾಚಾರ ಪ್ರಕರಣ: ನಾಲ್ವರ ಬಂಧನ

Photo Credit :

ಕಾಸರಗೋಡು ಹಿಂಸಾಚಾರ ಪ್ರಕರಣ: ನಾಲ್ವರ ಬಂಧನ

ಕಾಸರಗೋಡು: ವಿಧಾನಸಭಾ ಚುನಾವಣಾ ಮತ ಎಣಿಕಾ ದಿನದಂದು ಕಾಸರಗೋಡು ಮತ್ತು ಪರಿಸರದಲ್ಲಿ ಉಂಟಾದ ಹಿಂಸಾಚಾರದ ಸಂದರ್ಭದಲ್ಲಿ ವಸ್ತ್ರದಂಗಡಿ ನೌಕರನಿಗೆ ಹಲ್ಲೆ ನಡೆಸಿ ಸ್ಕೂಟರ್ ಗೆ  ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಬಿಜೆಪಿ ಕಾರ್ಯಕರ್ತರನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬೀರಂತಬೈಲ್ ನ  ಶಿವಪ್ರಸಾದ್, ನಿತಿನ್, ಅಭಿಲಾಷ್ ಮತ್ತು ಉಮೇಶ್ ನಾಯಕ್ ಎಂದು ಗುರುತಿಸಲಾಗಿದೆ. ಅಡ್ಕತ್ತಬೈಲ್ ನ  ಫರೀದ್ ಎಂಬವರ ಮೇಲೆ ತಂಡ ಹಲ್ಲೆ ನಡೆಸಿತ್ತು. ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ತಂಡವು ಈತನ ಮೇಲೆ ಕಲ್ಲೆಸೆದಿದ್ದು, ಆಯ ತಪ್ಪಿ ಕೆಳಬಿದ್ದ ಈತನ ಮೇಲೆ ಹಲ್ಲೆ ನಡೆಸಿದ್ದರು. ಬಳಿಕ ಈತನ ಸ್ಕೂಟರ್ ಗೆ ಬೆಂಕಿ ಹಚ್ಚಿದ್ದರು. ತಂಡದಿಂದ ತಪ್ಪಿಸಿ ಫರೀದ್ ಸ್ಕೂಟರ್ ತೊರೆದು ಪರಾರಿಯಾಗಿದ್ದು , ಈ ಸಂದರ್ಭದಲ್ಲಿ ತಂಡವು ಸ್ಕೂಟರ್ ನ್ನು ತಾಳಿಪಡ್ಪು ಮೈದಾನಕ್ಕೆ ಎಳೆದೊಯ್ದು ಬೆಂಕಿ ಹಚ್ಚಿತ್ತು. ಫರೀದ್ ರ  ದೂರಿನಂತೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು