ಕಾಸರಗೋಡು: ವಿಧಾನಸಭಾ ಚುನಾವಣಾ ಮತ ಎಣಿಕಾ ದಿನದಂದು ಕಾಸರಗೋಡು ಮತ್ತು ಪರಿಸರದಲ್ಲಿ ಉಂಟಾದ ಹಿಂಸಾಚಾರದ ಸಂದರ್ಭದಲ್ಲಿ ವಸ್ತ್ರದಂಗಡಿ ನೌಕರನಿಗೆ ಹಲ್ಲೆ ನಡೆಸಿ ಸ್ಕೂಟರ್ ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಬಿಜೆಪಿ ಕಾರ್ಯಕರ್ತರನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬೀರಂತಬೈಲ್ ನ ಶಿವಪ್ರಸಾದ್, ನಿತಿನ್, ಅಭಿಲಾಷ್ ಮತ್ತು ಉಮೇಶ್ ನಾಯಕ್ ಎಂದು ಗುರುತಿಸಲಾಗಿದೆ. ಅಡ್ಕತ್ತಬೈಲ್ ನ ಫರೀದ್ ಎಂಬವರ ಮೇಲೆ ತಂಡ ಹಲ್ಲೆ ನಡೆಸಿತ್ತು. ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ತಂಡವು ಈತನ ಮೇಲೆ ಕಲ್ಲೆಸೆದಿದ್ದು, ಆಯ ತಪ್ಪಿ ಕೆಳಬಿದ್ದ ಈತನ ಮೇಲೆ ಹಲ್ಲೆ ನಡೆಸಿದ್ದರು. ಬಳಿಕ ಈತನ ಸ್ಕೂಟರ್ ಗೆ ಬೆಂಕಿ ಹಚ್ಚಿದ್ದರು. ತಂಡದಿಂದ ತಪ್ಪಿಸಿ ಫರೀದ್ ಸ್ಕೂಟರ್ ತೊರೆದು ಪರಾರಿಯಾಗಿದ್ದು , ಈ ಸಂದರ್ಭದಲ್ಲಿ ತಂಡವು ಸ್ಕೂಟರ್ ನ್ನು ತಾಳಿಪಡ್ಪು ಮೈದಾನಕ್ಕೆ ಎಳೆದೊಯ್ದು ಬೆಂಕಿ ಹಚ್ಚಿತ್ತು. ಫರೀದ್ ರ ದೂರಿನಂತೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.