ಕಾಸರಗೋಡು: ಕೋರೆಯೊಂದರಲ್ಲಿ ಯುವಕನ ಮೃತದೇಹ ಪತ್ತೆಯಾದ ಘಟನೆ ನೀಲೇಶ್ವರದಲ್ಲಿ ನಡೆದಿದೆ.
ಮೃತ ಪಟ್ಟವನನ್ನು ಕೊಲ್ಲಾ೦ಪಾರ ಪಯ್ಯಂಕುಲದ ಅಖಿಲ್ ಜೋಸೆಫ್ (22) ರವರ ಮೃತದೇಹ ಆದಿತ್ಯವಾರ ಸಂಜೆ ಕರಿಂದಳದ ಕೋರೆಯೊಂದರಲ್ಲಿ ಪತ್ತೆಯಾಗಿದೆ.
ಶನಿವಾರ ಮಧ್ಯಾಹ್ನ ಊಟ ಮುಗಿಸಿ ಮನೆಯಿಂದ ತೆರಳಿದ್ದ ಅಖಿಲ್ ನಾಪತ್ತೆಯಾಗಿದ್ದನು.
ಇದರಿಂದ ಮನೆಯವರು ಶೋಧ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ.
ನೀಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.