ಕಾರವಾರ: ಜೊಯಿಡಾ ತಾಲೂಕಿನ ಬೆರಿಯಂಪಾಲಿ ಸಮೀಪವಿರುವ ಅರ್ಕುಡಾಕ್ಕೆ ಪ್ರವಾಸಕ್ಕೆಂದು ತೆರಳಿದ್ದ ಯುವಕರ ತಂಡದಲ್ಲಿದ್ದ ಇಬ್ಬರು ಈಜಲೆಂದು ಕಾಳಿ ನದಿಯಲ್ಲಿ ಇಳಿದಾಗ ಕಾಲು ಜಾರಿ ಬಿದ್ದು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.
ದಾಂಡೇಲಿ ನಗರದ ಟೌನ್ಶಿಪ್ ನಿವಾಸಿ ಗಣಪತಿ ನಾಯ್ಕ(29) ಹಾಗೂ ಬರ್ಚಿ ರಸ್ತೆಯಲ್ಲಿರುವ ಬಂಬುಗೇಟ್ ನಿವಾಸಿ ಯಲ್ಲಪ್ಪಾ(29) ಮೃತಪಟ್ಟವರು. ಮೃತರಿಬ್ಬರು ದಾಂಡೇಲಿಯಲ್ಲಿರುವ ಕಾಗದ ಕಾರ್ಖಾನೆಯ ಕಾರ್ಮಿಕರು.
ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.