ಉಡುಪಿ: ಉಡುಪಿ ರೈಲ್ವೇ ನಿಲ್ದಾಣದಲ್ಲಿ 1.66 ಕೋಟಿ ರೂಪಾಯಿ ಹಣ ಸಾಗಾಟ ಪತ್ತೆಯಾದ ಘಟನೆ ಶುಕ್ರವಾರ ನಡೆದಿದೆ.
ಶಿವಮೊಗ್ಗ ಉಪ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಹಣ ಸಾಗಾಟ ಗಮನ ಸೆಳೆದಿದೆ. ಮುಂಬೈಯಿಂದ ಕೇರಳಕ್ಕೆ ಹೋಗುವ 16345 ನೇತ್ರಾವತಿ ಎಕ್ಸ್ಪ್ರೆಸ್ನಲ್ಲಿ ಅಕ್ರಮ ಹಣ ಸಾಗಾಟದ ಮಾಹಿತಿ ತಿಳಿದು ನಡೆಸಿದ ಕಾರ್ಯಾಚರಣೆಯಿಂದ ಅಕ್ರಮ ಹಣ ಬೆಳಕಿಗೆ ಬಂದಿದೆ. ಈ ಸಂಬಂಧ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ರೈಲ್ವೇ ಪೊಲೀಸರು, ಹೆಚ್ಚಿನ ಮಾಹಿತಿಗಾಗಿ ಕಲೆ ಹಾಕುತ್ತಿದ್ದಾರೆ.
ಬೆಳಗ್ಗಿನ ಜಾವ ನಡೆದ ಕಾರ್ಯಾಚರಣೆಯಲ್ಲಿ ಸುಮಾರು 1.66 ಕೋಟಿ ಅಕ್ರಮ ಹಣ ಪತ್ತೆಯಾಗಿದೆ. ಮಣಿಪಾಲ ಹಾಗೂ ರೈಲ್ವೆ ಪೊಲೀಸರಿಂದ ವಿಚಾರಣೆ ಮುಂದುವರಿದಿದ್ದು, ಹಣ ಸಾಗಾಟ ಮಾಡುತ್ತಿದ್ದವರು ರಾಜಸ್ಥಾನದವರು ಎಂದು ತಿಳಿದುಬಂದಿದೆ. ಜಾಗ ಖರೀದಿಗಾಗಿ ಹಣ ತಂದಿರುವುದಾಗಿ ಹೇಳುತ್ತಿರುವ ಆರೋಪಿಗಳು, ಭಿನ್ನ ಉತ್ತರವನ್ನು ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿರುವ ಪೊಲೀಸರು ಹವಾಲಾ ಹಣ ಅಕ್ರಮ ಸಾಗಾಟದ ಶಂಕೆ ವ್ಯಕ್ತಪಡಿಸಿದ್ದಾರೆ. ಚುನಾವಣೆಗೆ ಈ ಹಣದ ಲಿಂಕ್ ಇದೆಯಾ ಎಂಬ ಬಗ್ಗೆಯೂ ತನಿಖೆ ಇನ್ನೊಂದೆಡೆ ನಡೆಯುತ್ತಿದ್ದೆ.