ಯಾದಗಿರಿ: ಟ್ರಕ್ ಚಾಲಕನೊಬ್ಬ ಮದ್ಯ ಸೇವಿಸಿ ಯರ್ರಾಬಿರ್ರಿ ಡ್ರೈವಿಂಗ್ ಮಾಡಿದ ಘಟನೆ ಯಾದಗಿರಿ ಜಿಲ್ಲೆಯ ಶಹಾಪೂರ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಕಿಲ್ಲರ್ ಡ್ರೈವರ್ ನ ಹುಚ್ಚಾಟಕ್ಕೆ ಓರ್ವ ಸಾವನ್ನಪ್ಪಿದ್ದಾನೆ. ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಟಿಪ್ಪರ ಚಾಲಕ ಜೀವನ್ ಎಂಬಾತ ನಿನ್ನೆ ಶಹಾಪೂರ ಪಟ್ಟಣದಲ್ಲಿ ಮದ್ಯ ಸೇವಿಸಿ ಟ್ರಕ್ ಚಲಾಯಿಸಿದ್ದಾನೆ. ವೇಗವಾಗಿ ಅಡ್ಡಾದಿಡ್ಡಿ ಗಾಡಿ ಚಲಾಯಿಸಿಕೊಂಡು ಬಂದ ನಿಂತಿದ್ದ ಟ್ರ್ಯಾಕ್ಟರ್ಗೆ ಗುದ್ದಿದ್ದಾನೆ ಪರಿಣಾಮ ಓರ್ವ ಸಾವನಪ್ಪಿದ್ದಾನೆ.
ಆರಂಭದಲ್ಲಿ ನಶೆಯಲ್ಲಿದ್ದ ಜೀವನ್ ಮರಕ್ಕೆ ಗುದ್ದಿದ್ದಾನೆ. ಬಳಿಕ ಟ್ರ್ಯಾಕ್ಟರ್ ಗೆ ಗುದ್ದಿದ್ದಾನೆ. ನಂತರ ಯುವಕನ ಮೇಲೆ ಟ್ರಕ್ ಚಲಾಯಿಸಿದ್ದಾನೆ. ಈ ದೃಶ್ಯ ಕಂಡುಬಂದಂತೆ ಸ್ಥಳೀಯರಿಂದ ಟ್ರಕ್ ಗೆ ಕಲ್ಲು ತೂರಾಟ ನಡೆಸಿದ್ದಾರೆ.ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಜೀವನ್ನನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.