News Karnataka Kannada
Thursday, May 02 2024
ವಿಜಯನಗರ

ಅಯೋಧ್ಯೆಯಲ್ಲಿ ಹೊಸಪೇಟೆ ತಂಡದಿಂದ ರಾಮಾಯಣ ಬಯಲಾಟ

ಅಯೋಧ್ಯೆಯಲ್ಲಿ ರಾಮನ ಪ್ರಾಣಪ್ರತಿಷ್ಠೆಯ ಅಂಗವಾಗಿ ಭಾನುವಾರದಿಂದ ಪ್ರಾರಂಭವಾಗಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೊಸಪೇಟೆಯ ಬಯಲಾಟ ತಂಡ ʼಸಂಪೂರ್ಣ ರಾಮಾಯಣʼದ ಯಶಸ್ವಿ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿತು.
Photo Credit : News Kannada

ಹೊಸಪೇಟೆ: ಅಯೋಧ್ಯೆಯಲ್ಲಿ ರಾಮನ ಪ್ರಾಣಪ್ರತಿಷ್ಠೆಯ ಅಂಗವಾಗಿ ಭಾನುವಾರದಿಂದ ಪ್ರಾರಂಭವಾಗಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೊಸಪೇಟೆಯ ಬಯಲಾಟ ತಂಡ ʼಸಂಪೂರ್ಣ ರಾಮಾಯಣʼದ ಯಶಸ್ವಿ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿತು.

ಕಿಷ್ಕಿಂಧೆಯ ಭಾಗವಾಗಿರುವ ಹೊಪೇಟೆಯ ತಂಡ ಕನ್ನಡದಲ್ಲೇ ಪ್ರಸ್ತುತಪಡಿಸಿದ ನಾಟಕವನ್ನು ಪ್ರೇಕ್ಷಕರು ಮೆಚ್ಚಿದ್ದು, ಕಲಾವಿದರ ವೇಷ, ಹಾಡುಗಾರಿಕೆ, ತಾಳವಾದ್ಯಗಳನ್ನು ಆನಂದಿಸಿದರು.

ʼಅಯೋಧ್ಯೆಯಲ್ಲಿ ಭಾರಿ ಚಳಿ ಇದ್ದರೂ ಅದು ಕಲಾವಿದರ ಉತ್ಸಾಹಕ್ಕೆ ಹಾಗು ಪ್ರದರ್ಶನಕ್ಕೆ ಅಡ್ಡಿಪಡಿಸಲಿಲ್ಲʼ ಎಂದು ತಂಡದ ಮುಖ್ಯಸ್ಥ ಕೆ.ಎಸ್.ಸತ್ಯನಾರಾಯಣ ಅವರ ಸಹೋದರ ರಾಘವೇಂದ್ರ ತಂಡದವರ ಪ್ರತಿ ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದುವರಿದು ಮಾತನಾಡಿದ ಅವರು, ʼದೇಶದ ಬೇರೆಬೇರೆ ಭಾಗಗಳಿಂದ ಬಂದಿರುವ ತಂಡಗಳ ಜೊತೆ ನಮ್ಮ ರಾಜ್ಯಕ್ಕೂ ಅವಕಾಶ ಸಿಕ್ಕಿದ್ದು, ಬುಧವಾರದ ನಾಲ್ಕನೆಯ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನವಾಗುವ ನಿರೀಕ್ಷೆ ಇದೆ ಹಾಗು ಈ ಕೊನೆಯ ಪ್ರದರ್ಶನದ ನಂತರ ತಂಡದ ಸಮೇತ ರಾಜ್ಯಕ್ಕೆ ಹಿಂದಿರುಗಲಿದ್ದೇವೆʼ ಎಂದರು.

ತಂಡದ ಮುಖ್ಯಸ್ಥ ಸತ್ಯನಾರಾಯಣ ರಾಮನ ಪಾತ್ರ ಮಾಡಿದರೆ, ಜ್ಯೋತಿ ಸೀತೆಯ ಪೋಷಾಕಿನಲ್ಲಿ ಕಾಣಿಸಿಕೊಂಡರು. ಉಳಿದ ಕಲಾವಿದರು ಪರಶುರಾಮ (ಲಕ್ಷ್ಮಣ), ವಿರೂಪಾಕ್ಷಯ್ಯ(ಹನುಮಂತ), ಚನ್ನಬಸವ(ರಾವಣ), ಶಂಕರ(ಸುಗ್ರೀವ), ಮಹೇಶ(ಶೂರ್ಪನಖಿ), ಬಿ.ಶಿವಪ್ಪ(ಸಾರಥಿ) ಪಾತ್ರ ನಿರ್ವಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು