ರಾಯಚೂರು: ರಾಯಚೂರಿನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ಸ್ಥಾಪನೆಗೆ ಸಂಬಂಧಿಸಿದಂತೆ ನಮ್ಮ ಸಹನೆ ಪರೀಕ್ಷಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಗುರುವಾರ ಮಂತ್ರಾಲಯದ ಪೀಠಾಧಿಪತಿ ಡಾ.ಸುಬುದೇಂದ್ರ ತೀರ್ಥ ಸ್ವಾಮೀಜಿ ಎಚ್ಚರಿಸಿದ್ದಾರೆ.
ರಾಯಚೂರಿನಲ್ಲಿ 308 ದಿನಗಳಿಂದ ಧರಣಿ ನಡೆಸುತ್ತಿರುವ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸಂದೇಶ ರವಾನಿಸಲಾಗಿದೆ.
ರಾಯಚೂರು ಬಂಗಾರದ ನಾಡು. ಎರಡು ನದಿಗಳು ಹರಿಯುವ ಅನ್ನದ ಬಟ್ಟಲು ಎಂದೇ ಹೆಸರಾಗಿದೆ. ಜಿಲ್ಲೆ ಈಗಾಗಲೇ ಐಐಟಿಯನ್ನು ಕಳೆದುಕೊಂಡಿದೆ. ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ. ಎಂದು ಎಚ್ಚರಿಸಿದರು.
”ರಾಯಚೂರಿಗೆ ಐಐಟಿ ಮಂಜೂರು ಮಾಡಬೇಕಿತ್ತು. ನಾವು ಕಳೆದುಕೊಂಡೆವು. ಹಸಿದವನಿಗೆ ಊಟ ಹಾಕಬೇಕು. ಹಸಿವಿಲ್ಲದವನಿಗೆ ಕೊಟ್ಟಾಗ ಬೆಲೆ ಇಲ್ಲ . ಪ್ರಧಾನಿ, ಮತ್ತು ಮುಖ್ಯಮಂತ್ರಿ ಪ್ರತಿಭಟನಾಕಾರರ ಬೇಡಿಕೆ ಆಲಿಸಬೇಕು ಎಂದರು.