ರಾಯಚೂರು : ಹೊಸ ವರ್ಷದ ಹಿಂದಿನ ದಿನ ರಾತ್ರಿ ಶಾಲೆಯ ಬಿಸಿಯೂಟ ಕೊಠಡಿಯ ಬೀಗ ಮುರಿದು ಒಳ ನುಗ್ಗಿರುವಂತ ಪುಂಡರ ಗುಂಪೊಂದು, ಶಾಲೆಯಲ್ಲೇ ಗುಂಡು, ತುಂಡಿನ ಪಾರ್ಟಿ ಮಾಡಿ, ವಿಕೃತಿ ಮೆರೆದಿರುವಂತ ಘಟನೆ, ಜಿಲ್ಲೆಯ ಮಾನ್ವಿ ತಾಲೂಕಿನ ರಬ್ಬಣಕಲ್ ಕ್ಯಾಂಪ್ ನ ಶಾಲೆಯೊಂದರಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ರಬ್ಬಣಕಲ್ ಕ್ಯಾಂಪ್ ನ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೋಣೆ ಬೀಗ ಮುರಿದಿರುವಂತ ಪುಂಡರು, ಅಲ್ಲಿಯೋ ತುಂಡು ಗುಂಡಿನ ಪಾರ್ಟಿಯನ್ನು ಮಾಡಿದ್ದಾರೆ. ಸಾಲದು ಎನ್ನುವಂತೆ ಶಾಲಾ ದಾಖಲಾತಿಗಳ ಮೇಲೆಲ್ಲಾ ಎಣ್ಣೆ ಸುರಿದು ಪುಂಡಾಟಿಕೆ ತೋರಿದ್ದಾರೆ.
ಇನ್ನೂ ಇದಲ್ಲದೇ ಅಡುಗೆ ಕೋಣೆಯಲ್ಲಿದ್ದಂತ ಅಕ್ಕಿ, ಹಾಲಿನಪುಡಿ, ಸಕ್ಕರೆ ಸೇರಿದಂತೆ ಇತರೆ ವಸ್ತುಗಳನ್ನು ಕಳ್ಳತನ ಮಾಡಿರೋದಾಗಿ ತಿಳಿದು ಬಂದಿದೆ. ಈ ಸಂಬಂಧ ಮುಖ್ಯೋಪಾಧ್ಯಾಯರು ಮಾನ್ವಿ ಪೊಲೀಸರಿಗೆ ದೂರು ನೀಡಿದ್ದು, ಶಾಲೆಯಲ್ಲೇ ಪಾರ್ಟಿ ಮಾಡಿ, ಪುಂಡಾಟ ಮೆರೆದಂತವರನ್ನು ಬಂಧಿಸುವಂತೆ ಮನವಿ ಮಾಡಿದ್ದಾರೆ.