ಕೊಪ್ಪಳ : ರಾಜ್ಯದಲ್ಲಿ ಕರೋನಾ ಮೂರನೆಯ ಅಲೆಯ ಭೀತಿ ಎದುರಾಗಿದೆ. ಈಗಾಗಲೇರಾಜ್ಯ ಸರ್ಕಾರ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಹಲವು ಜಿಲ್ಲೆಗಳಲ್ಲಿ ನಿರ್ಬಂಧ ಮತ್ತೆ ಜಾರಿಯಾಗಿದೆ. ಈ ಮಧ್ಯೆ ಕೊಪ್ಪಳ ಜಿಲ್ಲೆಯ ಒಂದೊಂದೇ ದೇವಸ್ಥಾನಗಳಲ್ಲಿ ಭಕ್ತರಿಗೆ ನಿರ್ಬಂಧ ಹೇರಾಲಾಗುತ್ತಿದೆ .
ಕಣ್ಣಿದ್ದವರು ಕನಕಗಿರಿ ನೋಡಬೇಕು, ಕಾಲಿದ್ದವರು ಹಂಪಿ ನೋಡಬೇಕೆಂಬ ನಾಣ್ನುಡಿ ಹೊಂದಿರುವ ಕೊಪ್ಪಳ ಜಿಲ್ಲೆಯ ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನವು ಆಗಸ್ಟ್ 4ರಿಂದ ಆಗಸ್ಟ್ 18ವರೆಗೆ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಕನಕಗಿರಿ ಕನಕಾಚಪಲಪತಿ ದೇವಸ್ಥಾನಕ್ಕೆ ಪ್ರವಾಸಿಗರು, ಭಕ್ತರು ಆಗಮಿಸುತ್ತಾರೆ, ಈಗ ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೊರೊನಾ ಸ್ಪೋಟವಾಗುತ್ತಿರುವ ಹಿನ್ನಲೆಯಲ್ಲಿ ಕನಕರಾಯನ ಗುಡಿಯನ್ನು ಬಂದ್ ಮಾಡಲು ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಕೇರಳದಲ್ಲಿ ಒಂದೇ ದಿನ 23,676 ಮಂದಿಗೆ ಕೋವಿಡ್ ಸೋಂಕು: 2 ತಿಂಗಳಲ್ಲಿಯೇ ರಾಜ್ಯವೊಂದರಲ್ಲಿ ಗರಿಷ್ಠ ಪ್ರಕರಣ
ಈಗಾಗಲೇ ಜಿಲ್ಲೆಯ ಅಂಜನಾದ್ರಿ, ಹುಲಿಗಿಯ ಹುಲಿಗೆಮ್ಮ ದೇವಸ್ಥಾನ, ತುಂಗಭದ್ರಾ, ಪಂಪಾವನಕ್ಕೆ ಪ್ರವಾಸಿಗರು, ಭಕ್ತರು ಆಗಮಿಸುವದನ್ನು ನಿರ್ಬಂಧಿಸಲಾಗಿದೆ. ಇದೇ ನಿಟ್ಟಿನಲ್ಲಿ ಈಗ ಕನಕಗಿರಿ ದೇವಸ್ಥಾನಕ್ಕೂ ನಿರ್ಬಂಧ ಹೇರಲಾಗಿದೆ, ಭಕ್ತರಿಗೆ ಮಾತ್ರ ಪ್ರವೇಶ ನಿರ್ಬಂಧಿಸಿದ್ದು ದೇವಸ್ಥಾನದಲ್ಲಿ ನಿತ್ಯ ಪೂಜೆಗೆ ಅವಕಾಶ ನೀಡಲಾಗಿದೆ, ದೇವಸ್ಥಾನ ಆಡಳಿತ, ಅರ್ಚಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಕೊರೊನಾ ತಡೆಗಾಗಿ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.