ಕೊಪ್ಪಳ : ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಇರುವುದು ಜನರ ಸೇವೆಗಾಗಿ. ಆದ್ದರಿಂದ ಎಲ್ಲರೂ ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ. ಆದರೆ, ಹಗಲು-ರಾತ್ರಿ ನಿಮ್ಮ ಮೊಬೈಲ್ ಸ್ವಿಚ್ಆಫ್ ಆಗಂಗಿಲ್ಲಾ , ಸಬೂಬ ಹೇಳುವಂತೆಯೇ ಇಲ್ಲ. ಇದು ತಮ್ಮ ಮೊದಲ ಸಭೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವ ಹಾಲಪ್ಪ ಆಚಾರ್ ಅವರ ಖಡಕ್ ಎಚ್ಚರಿಕೆ.
ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೋವಿಡ್-19 ಮೂರನೇ ಅಲೆ ನಿಯಂತ್ರಣ ಕ್ರಮಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಾನು ಯಾವುದೇ ಒತ್ತಡ ಹಾಕುವುದಿಲ್ಲ, ನೀವು ನಿಮ್ಮ ಪಾಡಿಗೆ ನಿಯಮಾನುಸಾರ ಕಾರ್ಯ ನಿರ್ವಹಿಸಿ, ಫೈಲ್ಗಳನ್ನು ಪೆಂಡಿಂಗ್ ಇಡುವಂತೆ ಇಲ್ಲ.
ಕೆಲಸಗಳನ್ನು ವಿಳಂಬ ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ . ಹಾಗಂತ ನಾನು ಬರಿ ಕೆಲಸಕ್ಕಾಗಿ ಸತಾಯಿಸುವುದಿಲ್ಲ, ಸರಿಯಾಗಿ ಕೆಲಸ ಮಾಡಿದರೇ ಬೆನ್ನು ಚಪ್ಪರಿಸುತ್ತೇನೆ. ಶ್ರದ್ಧೆಯಿಂದ ಹಗಲಿರಳು ಕೆಲಸ ಮಾಡಿ, ರಾಜ್ಯದಲಿಯೇ ಮಾದರಿ ಜಿಲ್ಲೆಯನ್ನು ಮಾಡೋಣ. ಹಾಗೆ ಮಾಡುವ ಮನಸ್ಸು ಇಲ್ಲದಿದ್ದರೆ ನಿಮ್ಮ ದಾರಿಯನ್ನು ನೀವು ನೋಡಿ, ರಾಜ್ಯವಿಶಾಲವಾಗಿದೆ ಎನ್ನುವ ಸಂದೇಶವನ್ನು ಕಳುಹಿಸಿದರು.