ಕಲಬುರಗಿ: ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ 133ನೇ ಜಯಂತ್ಯೋತ್ಸವ ಪ್ರಯುಕ್ತ ಕಲಬುರಗಿ 133 ಜನ ಪೌರಕಾರ್ಮಿಕರು ರಕ್ತದಾನ ಮಾಡುತ್ತಿರುವುದು ಮಾನವೀಯ ಮೌಲ್ಯಗಳನ್ನು ಎತ್ತಿತೋರಿದಂತದೆ.
ಏಕೆಂದರೆ ಸ್ವಾರ್ಥಕ್ಕಾಗಿ ಬದುಕುವ ಜನರ ನಡುವೆ ತಮ್ಮ ಕಷ್ಟದ ಕೆಲಸಗಳನ್ನು ಮಾಡುತ್ತಾ ಸಾಮಾಜಿಕ ಸೇವೆಯಲ್ಲಿ ತೊಡಗಿರುವುದು ಎಲ್ಲರ ಗಮನ ಸೇಳೆದಿದೆ.
ಸುದ್ದಿಗೊಷ್ಠಿಯನ್ನುದ್ದೇಶಿಸಿ ಮಾತನಾಡಿದ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಅನೀಲಕುಮಾರ ನರೋಣಾ ನಮ್ಮ ವೃತ್ತಿಯ ಜೊತೆಗೆ ಸಮಾಜಕ್ಕೆ ಏನಾದರೂ ಸಹಾಯ ಮಾಡುವ ನಿಟ್ಟಿನಲ್ಲಿ ಈ ವರ್ಷ ನಾಲ್ಕೈದು ದಿನಗಳಿಂದ ಪ್ರತಿನಿತ್ಯ ಪೌರಕಾರ್ಮಿಕರಿಂದ ವಿಶೇಷ ಕಾರ್ಯಕ್ರಮಗಳನ್ನು ಮಾಡಿದ್ದೆವೆ. ಏಪ್ರಿಲ್ 14 ರಂದು ಈ ದೇಶಕ್ಕೆ ಸಂವಿಧಾನ ಬರೆದು ಪ್ರಬುದ್ಧ ಭಾರತದ ಕನಸು ಕಂಡ ಮಹಾನ್ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಪ್ರಯುಕ್ತ ವಿನೂತನವಾಗಿ ಪೌರಕಾರ್ಮಿಕರಿಂದ ರಕ್ತದಾನ ಶಿಬಿರ ಆಯೋಜಿಸಿದ್ದೆವೆ.
ಅದಲ್ಲದೇ ಇಷ್ಟು ದಿನಗಳ ವರೆಗೆ ನಡೆದುಕೊಂಡು ಬಂದ ಕಾರ್ಯಗಳಲ್ಲಿ ಭಾಗಿಯಾಗಿ ಪ್ರಶಸ್ತಿ ಪಡೆದವರಿಗೆ ಜಿಲ್ಲಾಧಿಕಾರಿಗಳು ಸೇರಿದಂತೆ ಮಹಾಪೌರರನ್ನೊಳಗೊಂಡ ಅಧಿಕಾರಿ ವೃಂದ್ದದಿಂದ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದರು. ಪೌರ ಕಾರ್ಮಿಕರೆಂದರೆ ಬರಿ ಬೆವರನ್ನು ಸುರಿಸಿ ಕೆಲಸ ಮಾಡುವವರಷ್ಟೆ ಅಲ್ಲ,ಸಾಮಾಜಿಕ ಕಳಕಳಿ ಇರುವ ಮಹನೀಯರು ಎಂದು ತೋರಿಸಿಕೊಡಲು ಈ ಕಾರ್ಯಕ್ರಮಗಳನ್ನು ರೂಪಿಸಿದ್ದೆವೆ.ಕಾರ್ಯಕ್ರಮದಲ್ಲಿ ಪೌರಕಾರ್ಮಿಕರ ನ್ನುದ್ದೇಶಿಸಿ ಮಾತನಾಡಲು ವಿಶೇಷ ಭಾಷಣಕಾರರಾಗಿ ಡಾ.ಜಯದೇವಿ ಗಾಯಕವಾಡಿ ಬರಲಿದ್ದಾರೆ ಎಂದರು.
ಮಾಧ್ಯಮಗೊಷ್ಠಿಯಲ್ಲಿ ಪ್ರಮುಖರಾದ ವಿಜಯಕುಮಾರ್ ಕುಸಮೂರ್ತಿ, ಅರುಣಕುಮಾರ ಸುತಾರ,ಶ್ರವಣ ದರ್ಗಿ, ಶರಣು ಅತನೂರ, ಅನೀಲಕುಮಾರ ಚಕ್ರ, ಅನೀಲಕುಮಾರ ಬೋರಾಳಕರ, ಶಿವಪುತ್ರ ಸುತಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.