ಕಲಬುರಗಿ : ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಸ್ಥಿತ್ವವನ್ನು ಕಳೆದುಕೊಂಡು ಹಿನಾಯ ಸ್ಥಿತಿಗೆ ಬಂದಿದ್ದು, ಸುಮ್ಮನೆ ಟಿಕೇ ಮಾಡುವುದೊಂದೆ ಅವರ ಕೆಲಸವಾಗಿದೆ ಎಂದು ವಿಧಾನ ಪರಿಷತ್ ಚುನಾವಣಾ ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ್ ಹೇಳಿದ್ದಾರೆ.
ಅವರು ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಚಿತ್ತಾಪುರ ಮಂಡಲದ ವತಿಯಿಂದ ಮಾಡಬೂಳದಲ್ಲಿ ಹಮ್ಮಿಕೊಂಡಿರುವ ವಿಧಾನಪರಿಷತ್ ಚುನಾವಣೆಯ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ನನಗೆ ಕಳೆದ ಬಾರಿ ನಮ್ಮ ಪಕ್ಷದ ಎಲ್ಲ ನಾಯಕರು ಹೇಳಿದಾಗ ,ವಿಧಾನ ಪರಿಷತ್ ಚುನಾವಣೆ ಗೆ ಕಣಕ್ಕೆ ಇಳಿದೆ, ಹೀಗಾಗಿ ನಾನು ಕಳೆದ ಬಾರಿ ಚುನಾವಣೆಯಲ್ಲಿ 804 ಮತಗಳಿಂದ ಗೆಲ್ಲಲು ನಿಮ್ಮ ಆಶೀರ್ವಾದ ಬಹಳ ಪ್ರಮುಖವಾಗಿತ್ತು ಎಂದರು.
ನನ್ನ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೆನೆ. ನಿಪ್ಪಾಣಿ ಗ್ರಾಮದಲ್ಲಿ ಸುವರ್ಣ ಗ್ರಾಮದ ಯೋಜನೆಯಡಿ ಒಂದು ಕೋಟಿ ರೂಪಾಯಿ ಖಚು೯ ಮಾಡಿ,ಕೆಲಸಮಾಡಿಸಿದ್ದೇನೆ ಎಂದರು.
ನಮ್ಮ ಅನುದಾನದಲ್ಲಿ ಆದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ,ಈಗ ತಮ್ಮ ಮುಂದೆ ಪುನ: ಬಂದು ಮತಯಾಚನೆ ಮಾಡುತ್ತಿದ್ದೇನೆ. ತಾವೆಲ್ಲರೂ ಪುನಃ ನನಗೆ ಆಶೀರ್ವಾದ ಮಾಡಿ ಮೇಲ್ಮನೆ ಗೆ ಕಳುಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ ಎಂದರು.
ಕಲಬುರಗಿ-ಯಾದಗಿರಿ ಸೇರಿ 2 ಕೋಟಿ ಅನುದಾನ ಇರುತ್ತದೆ. ಈ ಅನುದಾನದಲ್ಲಿ ಸಾಕಷ್ಟು ಕೆಲಸ ಮಾಡುತ್ತಾ ಬಂದಿದ್ದು, ಮುಂದೆಯೂ ಮಾಡಲಿದ್ದೇನೆ ಎಂದರು.ಕಾಂಗ್ರೆಸ್ ಪಕ್ಷದವರಿಗೆ ಮಾಡಲು,ಕೆಲಸವಿಲ್ಲ. ಅವರಿಗೆ ನಮ್ಮ ಅಭಿವೃದ್ಧಿ ಕಾಯ೯ಗಳು ಕಾಣುತ್ತಿಲ್ಲ ಎಂದರು. ಹೀಗಾಗಿ ಮನಸ್ಸಿಗೆ ಬಂದ ಹಾಗೇ ಮಾತನಾಡಿಕೊಳ್ಳುತ್ತಾರೆ ಎಂದು ಹೇಳಿದರು.
ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ಬಿ.ಜಿ. ಪಾಟೀಲ್ ಅವರು ಕಳೆದ ಬಾರಿ ಚುನಾಯಿತರಾದ ಮೇಲೆ ಅವರ ಅನುದಾನದಡಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಹೆಚ್ಚಿನ ಅಭಿವೃದ್ಧಿ ಕಾಯ೯ಗಳಿಗೆ ಶ್ರಮಸುವ ನಾಯಕತ್ವ ಅವರ ಬಳಿ ಇದೆ . ಹೀಗಾಗಿ ಅವರಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ, ಬಿಜೆಪಿ ಯನ್ನು ಗೆಲ್ಲಿಸಬೇಕೆಂದು ಕೇಳಿಕೊಂಡರು.
ಈ ಸಂದರ್ಭದಲ್ಲಿ ಚಿತ್ತಾಪುರ ಮಂಡಲದ ಅಧ್ಯಕ್ಷ ನೀಲಕಂಠರಾವ ಪಾಟೀಲ,ಕಲಬುರಗಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಶಿವರಾಜ್ ಪಾಟೀಲ,ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ,ವಿಧಾನಪರಿಷತ್ ಸದಸ್ಯ ಶಶಿಲ .ಜಿ. ನಮೋಶಿ,ಚಿತ್ತಾಪುರ ಮಾಜಿ ಶಾಸಕರ ವಿಶ್ವನಾಥ ಪಾಟೀಲ ಹೆಬ್ಬಾಳ,ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಮುಖಂಡರ ಬಸವರಾಜ ಇಂಗಿನ,ಅರವಿಂದ ಚವಾಣ್,ವಿಠಲ ವಾಲ್ಮೀಕಿನಾಯಕ,ಬಸವರಾಜ ಶಿವಗೊಳ, ಬಾಬುಮಿಯಾ ಕಲಗುರ್ತಿ,ಸೋಮಶೇಖರ್ ಬೆಳಗುಂಪಿ,ಸಂಗಮೇಶ ವಾಲಿಕರ,ಬಸವರಾಜ ಬೇಣ್ಣೂರ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.