News Karnataka Kannada
Tuesday, April 30 2024
ಕಲಬುರಗಿ

ತಾಲಿಬಾನಿಗಳ ಪರವಾಗಿ ಮಾತನಾಡುತ್ತಿರುವವರು ನೈಜ ಮುಸ್ಲಿಮರಲ್ಲ ಎಂದ ಮಾಜಿ ಸಚಿವ ಯು ಟಿ ಖಾದರ್‌

U T Khader
Photo Credit :

ಕಲಬುರಗಿ: ತಾಲಿಬಾನ್ ಸಂಸ್ಕೃತಿ ಪರ ಮಾತಾಡುವವರು ನೈಜ ಭಾರತಿಯ ಮತ್ತು ನೈಜ ಮುಸ್ಲಿಂನಾಗೋದಿಲ್ಲ ಎಂದು ಶಾಸಕ ಯು. ಟಿ. ಖಾದರ್ ಖಾರವಾಗಿಯೇ ಹೇಳಿದ್ದಾರೆ.
ತಾಲಿಬಾನ್ ಸಂಸ್ಕೃತಿ ಪರ ಮಾತನಾಡುವವರು ನೈಜ ಮುಸ್ಲಿಂ ಅಲ್ಲನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಧರ್ಮದಲ್ಲಿಯೂ ಕೂಡ ಆ ರೀತಿಯ ಸಂದೇಶ ಇಲ್ಲ, ಎಲ್ಲ ಧರ್ಮ ಶಾಂತಿ ಸಹಬಾಳ್ವೆಯಿಂದ ಬದುಕಲು ಹೇಳಿವೆ‌. ತಾಲಿಬಾನ್ ಸಂಸ್ಕೃತಿ ನಮ್ಮ ತತ್ವ ಆದರ್ಶಗಳ ವಿರುದ್ದವಾದಂತಹ ಸಂಸ್ಕೃತಿ ಎಂದು ಅವರು ಹೇಳಿದರು.
ಶರಿಯಾ ಕಾನೂನಿನ ಆಡಳಿತ ಸಹಿಸೋದಕ್ಕೆ ಸಾಧ್ಯವಿಲ್ಲ. ಯಾವ ಧರ್ಮವು ಕೂಡ ಈ ರೀತಿ ಆಚರಿಸೋದಕ್ಕೆ ಹೇಳಿಲ್ಲ. ಇದು ಜಾಸ್ತಿ ದಿನ ಬದುಕುಳಿಯುತ್ತೆ ಎಂದು ಹೇಳೊಕೆ ಆಗೋದಿಲ್ಲ ಎಂದು ಹೇಳಿದರು.ತಾಲಿಬಾನ್ ಭಾರತ ದೇಶದ ಪಕ್ಕದಲ್ಲಿ ಬಂದಿರೋದ್ರಿಂದ ನಾವು ಕೂಡಾ ಬಹಳ ಎಚ್ಚರದಿಂದ ಇರಬೇಕಾಗುತ್ತೆ. ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿ ಅವರು ಏನ್ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುವುದನ್ನು ಕಾಯ್ದು ನೋಡಬೇಕು ಎಂದು ಅವರು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು