ಕಲಬುರ್ಗಿ (ಮಾ.6) : ಕಲಬುರ್ಗಿಯಲ್ಲಿ ಕಲ್ಲಿನ ಬಸವ ಮೂರ್ತಿ ಹಾಲು ಕುಡಿದ ಪವಾಡವೊಂದು ನಡೆದಿದೆ. ಕಲ್ಲಿನ ಬಸವ ಹಾಲು ಕುಡಿದ ದೃಶ್ಯವನ್ನು ಜನರು ಕಣ್ತುಂಬಿಕೊಂಡಿದ್ದಾರೆ. ಈ ಪವಾಡ ನಡೆದಿರೋದು ಕಲಬುರ್ಗಿಯ ಬ್ಯಾಂಕ್ ಕಾಲೋನಿಯ ಈಶ್ವರ ದೇವಾಸ್ಥಾನದಲ್ಲಿ. ಇದೀಗ ದೇವಸ್ಥಾನಕ್ಕೆ ಜನ ಮರಳೋ ಜಾತ್ರೆ ಮರಳೋ ಎಂಬಂತೆ ಜನ ಸಾಗರವೇ ಹರಿದು ಬರ್ತಿದೆ. ಕಲ್ಲಿನ ಬಸವ ಹಾಲು ಕುಡಿಯುತ್ತಿದೆ ಎಂದು ತಿಳಿಯುತ್ತಿದ್ದಂತೆ ಜನರು ನಾವು ಕಣ್ಣಾರೆ ನೋಡಿ ಹಾಲು ಕುಡಿಸೋದಾಗಿ ದೇವಾಲಯಕ್ಕೆ ಬರ್ತಿದ್ದಾರೆ.
ಕಲಬುರಗಿಯ ಬ್ಯಾಂಕ್ ಕಾಲೋನಿಯ ಈಶ್ವರ ದೇಗುಲದಲ್ಲಿ ಗುಡಿಯ ಮುಂದೆ ಬಸವಣ್ಣನ ಮೂರ್ತಿಯಿದ್ದು, ಭಕ್ತರೊಬ್ಬರು ಮೂರ್ತಿಗೆ ಹಾಲು ಕುಡಿಸಿದ್ದಾರೆ. ಈ ವೇಳೆ ಬಸವನ ಒಳಗೆ ಹಾಲು ಸೇರಿದ್ದು, ಜನ ಬೆರಗಾಗಿದ್ದಾರೆ. ಬಳಿಕ ಮಹಿಳೆಯರು ಮಕ್ಕಳೆಲ್ಲ ಆಗಮಿಸಿ ಬಸವನ ಮೂರ್ತಿಗೆ ಹಾಲು ಕುಡಿಸಿದ್ದಾರೆ. ಶನಿವಾರ ರಾತ್ರಿ 10:30ರ ಸುಮಾರಿಗೆ ಬಸವಣ್ಣನಿಗೆ ಹಾಲು ಕುಡಿಸಿದ್ದಾರೆ. ಬಸವಣ್ಣ ಹಾಲು ಕುಡಿದ ಎಂದು ಜನ ನಂಬಿದ್ದಾರೆ. ನಾವೇ ನಮ್ಮ ಕೈನಿಂದ ಹಾಲು ಕುಡಿಸಿದ್ದೇವೆ, ಬಸವಣ್ಣ ಹಾಲು ಕುಡಿಯೋದನ್ನ ಕಣ್ಣಾರೆ ನೋಡಿದ್ದೇವೆ ಅಂತಾ ಜನ ಹೇಳಿಕೊಳ್ತಿದ್ದಾರೆ..!
ಕಲ್ಲಿನ ಬಸವ ಹಾಲು ಕುಡಿಯುತ್ತಿದೆ ಎಂಬ ವದಂತಿ ಕಲಬುರಗಿಯಲ್ಲಿ ಹರಡಿದೆ. ಹೀಗಾಗಿ, ಮಹಿಳೆಯರು ಬಸವನಿಗೆ ಹಾಲು ಕುಡಿಸಲು ಸಾಲುಗಟ್ಟಿ ನಿಂತಿದ್ದಾರೆ. ಜನ ಮರುಳೋ, ಜಾತ್ರೆ ಮರುಳೋ ಎಂಬಂತಾಗಿದೆ ಕಲಬುರಗಿಯ ಪರಿಸ್ಥಿತಿ..! ಕಲಬುರಗಿ ನಗರದ ಬ್ಯಾಂಕ್ ಕಾಲೋನಿಯ ಜನರು ಬ್ಯಾಂಕ್ ಕಾಲೋನಿಯ ಈಶ್ವರ ದೇವಸ್ಥಾನದಲ್ಲಿನ ಕಲ್ಲಿನ ಬಸವಣ್ಣನಿಗೆ ಹಾಲು ಕುಡಿಸಲು ಮುಂದಾಗಿದ್ದಾರೆ.
ಕಲ್ಲಿನ ಬಸವ ಹಾಲು ಕುಡಿಯುತ್ತಿದ್ದಾನೆ ಅನ್ನೋ ವಿಚಾರ ಕಲಬುರಗಿಯಾದ್ಯಂತ ಕಾಳ್ಗಿಚ್ಚಿನಂತೆ ಹಬ್ಬಿದ್ದು, ಸುತ್ತಮುತ್ತಲ ಪ್ರದೇಶಗಳ ಜನರು ದೇವಸ್ಥಾನಕ್ಕೆ ಭೇಟಿ ಕೊಟ್ಟು ನಂದಿ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿ, ಮಂಗಳಾರತಿ ಮಾಡಿ ಭಜನೆ ಮಾಡೋದಕ್ಕೆ ಮುಂದಾಗಿದ್ದಾರೆ. ಆದರೆ ಭಾನುವಾರ ಬೆಳಗ್ಗೆ ಬಸವಣ್ಣನಿಗೆ ಹಾಲು ಕುಡಿಸೋಕೆ ಹೋದ್ರೆ ಬಸವಣ್ಣ ಕುಡಿದಿಲ್ಲ ಎಂದು ಜನ ಹೇಳ್ತಿದ್ದಾರೆ. ಶನಿವಾರ ರಾತ್ರಿ ನಮ್ಮ ಕೈಯಾರೆ ನಾವು ಹಾಲು ಕುಡಿಸಿದಾಗ ಬಸವಣ್ಣ ಕುಡಿದಿದ್ದಾನೆ ಎಂದು ವಾದಿಸುತ್ತಿರುವ ಜನರು, ಇದು ಪವಾಡವೇ ಸರಿ ಅಂತಾ ಹೇಳ್ತಿದ್ದಾರೆ. ಕಲ್ಲಿನ ಬಸವಣ್ಣ ಹಾಲು ಕುಡಿದ ಹಿನ್ನೆಲೆಯಲ್ಲಿ ನಮಗೆಲ್ಲರಿಗೂ ಒಳ್ಳೆಯದಾಗುತ್ತೆ ಅನ್ನೋದು ಜನರ ನಂಬಿಕೆ.