ಬೀದರ್ (ಏ.15): ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಮಲ್ಕಾಪೂರ, ಬರಿದಾಬಾದ್, ಬೋರಾಳ, ಕಮಠಾಣಾ, ಗೌಸಪೂರ, ಯದಲಾಪೂರ, ಮೀರಜ್ ಕಾಲೋನಿ, ಸಿರ್ಸಿ ಎ, ಶಮಶೀರನಗರ, ನಿರ್ಣಾ, ಮಗದಳ್, ರೇಕುಳಗಿ, ಯದಲಾಪೂರ, ಮನ್ನಳ್ಳಿ, ಮನ್ನಾಎಖೇಳ್ಳಿ, ಖಾಶೆಂಪುರ್ ಸಿ, ಬೇಮಳಖೇಡ ಸೇರಿದಂತೆ ಸುಮಾರು 17ಕ್ಕೂ ಹೆಚ್ಚು ಗ್ರಾಮಗಳ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಯುವಕರು, ಮಹಿಳೆಯರು, ಮುಖಂಡರು ನೂರಾರು ಸಂಖ್ಯೆಯಲ್ಲಿ ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬೀದರ್ ದಕ್ಷಿಣ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ನಿವಾಸದ ಆವರಣದಲ್ಲಿ ಸುಮಾರು 17ಕ್ಕೂ ಹೆಚ್ಚು ಗ್ರಾಮಗಳ ನೂರಾರು ಜನ ಯುವಕರು, ಮುಖಂಡರಿಗೆ ಶುಕ್ರವಾರ ಜೆಡಿಎಸ್ ಶಾಲು ಹೊದಿಸಿ, ಪಕ್ಷದ ಧ್ವಜ ನೀಡುವ ಮೂಲಕ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್, ಜೆಡಿಎಸ್ ಪಕ್ಷದ ತತ್ವಸಿದ್ದಾಂತಗಳನ್ನು ಮೆಚ್ಚಿ ಪ್ರತಿನಿತ್ಯ ಸಾವಿರಾರು ಜನರು ಜಾತ್ಯಾತೀತ ಜನತಾದಳ (ಜೆಡಿಎಸ್) ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಅವರೆಲ್ಲರೂ ನಮ್ಮ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಈ ಮೂಲಕ ಪಕ್ಷ ಸಂಘಟನೆ, ಬಲವರ್ಧನೆಯಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಮಲ್ಕಾಪೂರ, ಬರಿದಾಬಾದ್, ಬೋರಾಳ, ಕಮಠಾಣಾ, ಗೌಸಪೂರ, ಯದಲಾಪೂರ, ಮೀರಜ್ ಕಾಲೋನಿ, ಸಿರ್ಸಿ ಎ, ಶಮಶೀರನಗರ, ನಿರ್ಣಾ, ಮಗದಳ್, ರೇಕುಳಗಿ, ಯದಲಾಪೂರ, ಮನ್ನಳ್ಳಿ, ಮನ್ನಾಎಖೇಳ್ಳಿ, ಖಾಶೆಂಪುರ್ ಸಿ, ಬೇಮಳಖೇಡ ಗ್ರಾಮಗಳ ಮುಖಂಡರು, ಕಾರ್ಯಕರ್ತರು ನೂತನವಾಗಿ ಜೆಡಿಎಸ್ ಸೇರಿದ ಗ್ರಾಮ ಪಂಚಾಯತಿ ಸದಸ್ಯರು, ಮುಖಂಡರು, ಮಹಿಳೆಯರು, ಕಾರ್ಯಕರ್ತರು ಸೇರಿದಂತೆ ಅನೇಕರಿದ್ದರು.