News Karnataka Kannada
Thursday, May 02 2024
ಬೀದರ್

ಹುಮನಾಬಾದ್: ‘ ಬಿಎಸ್ಎಸ್‌ಕೆ ಕಾರ್ಖಾನೆಗೆ ಬೀಗ ಹಾಕಿಸಿದ್ದೆ ಸಾಧನೆ ‘

'Shut down BSSK factory is an achievement'
Photo Credit : News Kannada

ಹುಮನಾಬಾದ್: ಹುಮನಾಬಾದ್ ವಿಧಾನ ಸಭಾ ಕ್ಷೇತ್ರಕ್ಕೆ ಬಿಜೆಪಿ ಅವರ ಕೊಡುಗೆ ಏನಿದೆ. ಕೇವಲ ಗ್ರಾಮಗಳಲ್ಲಿ ವಿಶ್ರಾಂತಿ ಪಡೆಯಲು ಎರಡು ಬೆಂಚ್ ಹಾಕಿದ್ದಾರೆಯಷ್ಟೇ ಎಂದು ಶಾಸಕ ರಾಜಶೇಖರ ಪಾಟೀಲ ಬಿಜೆಪಿ ನಾಯಕರ ವಿರುದ್ಧ ಲೇವಡಿ ಮಾಡಿದರು.

ತಾಲ್ಲೂಕಿನ ಕಲ್ಲೂರ್, ಬೋರಂಪಳ್ಳಿ,ಕಠಳ್ಳಿ, ಚಿತ್ತಕೋಟ ಹಳ್ಳಿಖೇಡ್ ಕೆ. ಹಳ್ಳಿಖೇಡ್ ವಾಡಿ, ಮುಸ್ತಾಪುರ್ ಗ್ರಾಮಗಳಲ್ಲಿ ಸೋಮ ವಾರ ಕಾಂಗ್ರೆಸ್ ಗ್ಯಾರಂಟಿ ಪತ್ರ ವಿತರಣೆ ಮಾಡಿ ಅವರು ಮಾತನಾಡಿದರು.

‘ಸುಭಾಷ್ ಕಲ್ಲೂರ್ ಅವರು ಬಿಎಸ್‌ಎಸ್‌ಕೆ ಅಧ್ಯಕ್ಷರಾಗಿ ಕಾರ್ಖಾನೆಗೆ ದೊಡ್ಡದೊಂದು ಬೀಗ ಹಾಕಿದ್ದಾರೆ ಹೊರತು ಏನು ಅಭಿವೃದ್ಧಿ ಮಾಡಿಲ್ಲ. ಕ್ಷೇತ್ರದ ರೈತರ ಪರವಾಗಿ ಪಕ್ಷಾಬೇಧ ಮರೆತು ಕಾರ್ಖಾನೆಗೆ ₹10 ಕೋಟಿ ಅನುದಾನ ತರುವಲ್ಲಿ ನಾನು ಸುಭಾಷ್ ಕಲ್ಲೂರ್ ಅವರಿಗೆ ಸಹಕರಿಸಿದ್ದೇನೆ. ಆದರೆ ಅವರು ಒಂದು ಬಾರಿಯೂ ನನ್ನ ಹೆಸರು ಪ್ರಸ್ತಾಪ ಮಾಡಲಿಲ್ಲ. ಎಂದು ಬೇಸರ ವ್ಯಕ್ತಪಡಿಸಿದರು.

ಸುಭಾಷ್ ಅವರ ತಮ್ಮ ಸ್ವಂತ ಗ್ರಾಮವಾದ ಕಲ್ಲೂರಿಗೆ ಅವರ ಅಭಿವೃದ್ಧಿ ಕೊಡುಗೆ ಶೂನ್ಯ. ಕಲ್ಲೂರ್ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ನಾನು ಶ್ರಮಿಸಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ 10 ಕೆ.ಜೆ. ಅಕ್ಕಿ, 200 ಯೂನಿಟ್ ವಿದ್ಯುತ್ ಸೌಲಭ್ಯ, ಮನೆಯ ಮಹಿಳೆಗೆ ₹2000 ನೀಡಲಾಗುವುದು. ಹೀಗಾಗಿ ನಿಮ್ಮ ಮತ ಕಾಂಗ್ರೆಸ್ ಪಕ್ಷಕ್ಕೆ ಹಾಕಿ ಎಂದು‌ ಸಾರ್ವಜನಿಕರಲ್ಲಿ ಮನ ಮನವಿ ಮಾಡಿದರು.

ಕಲ್ಲೂರ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಿಯಾಂಕ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರಣ್ಣ ಪಾಟೀಲ, ಟಿಎಪಿಸಿಎಂಎಸ್ ಅಧ್ಯಕ್ಷ ಅಭಿಷೇಕ್ ಪಾಟೀಲ, ಅಫ್ಸರ್ ಮಿಯ್ಯಾ, ಅರುಣ್ ಕುರ್ಣೆ, ಉಮೇಶ್ ಜಮಗಿ, ಶಿವರಾಜಪ್ಪ ಪಾಟೀಲ, ಬಸವರಾಜ ಪಾಟೀಲ, ಅನೀಲ ದೊಡ್ಡಿ , ಜಗನಾಥ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು