ಬೀದರ್/ ಚಿಟಗುಪ್ಪ: ತಾಲೂಕಿನ ಬೀದರ್ ದಕ್ಷಿಣ ಕ್ಷೇತ್ರದ ಭಾರತಿಯ ಜನತಾ ಪಾರ್ಟಿ ಕಾರ್ಯಲಯದಲ್ಲಿ ಶನಿವಾರ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಕೆಎಸ್ಐಐಡಿಸಿ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಅವರ ನೇತೃತ್ವದಲ್ಲಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮ ಉದ್ಘಾಟಿಸಿ ಕೇಂದ್ರ ಸಚಿವ ಭಗವಂತ ಖೂಬಾ ಅವರು ಮಾತನಾಡಿ ಶೈಲೇಂದ್ರ ಬೆಲ್ದಾಳೆ ಅವರ ಬಳಗದಿಂದ ರೂಪಿತವಾಗಿರುವ ಕ್ಯಾಲೆಂಡರ್ ದಕ್ಷಿಣ ಕ್ಷೇತ್ರದ ಎಲ್ಲಾ ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರಗಳು ಒಳಗೊಂಡಿದ್ದು ಒಳ್ಳೆಯ ಸಂದೇಶ ನೀಡುವ ಕ್ಯಾಲೆಂಡರ್ ಆಗಿದೆ. ಪ್ರತಿ ಬೂತ್ನ ಪ್ರಮುಖರು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡಿರುವ ಸಾಧನೆಯ ಕುರಿತು ಮನೆ ಮನಕ್ಕೆ ತಲುಪಿಸುವ ಪ್ರಯತ್ನ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಿ ಕೆಎಸ್ಐಐಡಿಸಿ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ ಬೀದರ್ ದಕ್ಷಿಣ ಕರ್ನಾಟಕದ ಕಾಶಿ ಎಂದೇ ಪ್ರಖ್ಯಾತವಾಗಿದ್ದು ಅನೇಕ ಐತಿಹಾಸಿಕ ಸ್ಥಳಗಳು ಹಾಗೂ ಧಾರ್ಮಿಕ ಕ್ಷೇತ್ರಗಳು ಒಳಗೊಂಡಿರುವ ಕ್ಷೇತ್ರ ದಕ್ಷಿಣ ಕ್ಷೇತ್ರದ ಪಕ್ಷದ ಹಿರಿಯ ಮುಖಂಡರ ಹಾಗೂ ಕಾರ್ಯಕರ್ತರ ಸಲಹೆ ಮೇರೆಗೆ ಜನರಿಗೆ ಉಪಯುಕ್ತವಾಗುವ ರೀತಿಯಲ್ಲಿ ಕ್ಯಾಲೆಂಡರ್ ರಚಿಸಲಾಗಿದ್ದೆ ಒಂದು ವರ್ಷದ ಸಮಗ್ರ ಚಿತ್ರಣ ಪ್ರತಿ ತಿಂಗಳ ವಿಶೇಷತೆ ಕುರಿತು ವಿವರಿಸಲಾಗಿದೆ ಎಂದರು. ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿ ಸದ್ಯಸತ್ವ ಅಭಿಯಾನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪೂರ್ಣಗೊಳಿಸಿ, ಪ್ರತಿ ಮನೆ ಮನೆಗೆ ತೆರಳಿ ಬಿಜೆಪಿ ಸರ್ಕಾರದ ಕಾರ್ಯವನ್ನು ತಿಳಿಸಿ ಎಂದರು.
ಕ್ಯಾಲೆಂಡರನ್ ವಿಶೇಷತೆ: ಕ್ಯಾಲೆಂಡರ್ ನಲ್ಲಿ ವಿಶೇಷವಾಗಿ ಕ್ಷೇತ್ರದ 48 ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳ ಭಾವಚಿತ್ರ ಹಾಗೂ ಐತಿಹಾಸಿಕ ಸ್ಥಳಗಳ ಕುರಿತು ವಿವರಿಸಲಾಗಿದೆ.
ಈ ಸಂದರ್ಭದಲ್ಲಿ ಬಾಬು ವಾಲಿ, ಶಕುಂತಲಾ ಬೆಲ್ದಾಳೆ, ಚಂದ್ರಶೇಖರ ಪಾಟೀಲ, ರಾಜರೆಡ್ಡಿ ಶಾಹಬಾದ್, ಜಗನ್ನಾಥ ಪಾಟೀಲ, ಹೆಮ್ಮಾ ತುಕಾರೆಡ್ಡಿ, ಚನ್ನಪ್ಪಾ ಗೌರಶೆಟ್ಟಿ, ಚಂದ್ರಯ್ಯಾ ಸ್ವಾಮಿ, ಸುರೇಶ ಮಾಶೇಟ್ಟಿ, ಜಗನ್ನಾಥ ಪಾಟೀಲ, ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.